Wednesday, July 18, 2007

ಶಾಂತಿ ಸತ್ತಾಗ

ನಿನ್ನೆ ಶುರುವಾಗಿದ್ದ ಕಣ್ಣಿರು ಇನ್ನು ಆದರೂ ಮುಗಿದಿಲ್ಲ ಶಾಲೆ ಹೋಗೊಕೆ ಶುರು ಮಾಡಿ ಇನ್ನು ಎರಡು ತಿಂಗಳು ಸಹ ಆಗಿರರಲಿಲ್ಲ ಮಗಳು ಶಾಂತಿ ಐದು ವರ್ಷದ ಮುದ್ದು ಕಂದ ಇವತ್ತು ಜಗತ್ತಿನ ಯಾವುದೇ ಹಂಗಿಲ್ಲದೆ ಅವರ ಎದುರಿಗೆ ಹೆಣವಾಗಿ ಮಲಗಿದಾಳೆ ಅಮ್ಮನಿಗೆ ವಿಶ್ವಾಸ ಮಲಗಿದವಳು ಇನ್ನೇನು ಎದ್ದು ಕೂಡ್ತಾಳೆ ಅಂತ ,ಇದ್ದ ಒಬ್ಳೆ ಮಗಳನ್ನ ಕಳೆದುಕೊಂಡ ಸಂಕಟ ಮೂರ್ತಿಯ ಕಣ್ಣಲ್ಲೆ ಕಾಣತಿತ್ತು ಅಲ್ಲಿ ಅವರಿಬ್ಬರಿಗೆ ಸಮಾಧಾನ ಮಾಡೊಕೆ ಯಾರು ಇರಲಿಲ್ಲ ,
ಒಂದು ಪುಸ್ತಕ ಜಾಸ್ತಿ ಆದರೆ ಅಳುತ್ತಿದ್ದ ಕಂದ ಈಗ ಮೈಮೆಲೆ ಹೂವಿನ ರಾಶಿಯೆ ಇದೆ ಆದರೂ ಮಿಸುಗಾಡುತ್ತಿಲ್ಲ ಅವಳ ಮುಖದಲ್ಲಿ ಜಗತ್ತಿನ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿದ ನಿರಾಳ ಭಾವ
ಮೊನ್ನೆ ಆಗಿದ್ದಾದರು ಏನು ಶಾಲೆಯ ಆಟದ ಸಮಯದಲ್ಲಿ ಶಾಂತಿ ತನ್ನ ಹಿರಿಯ ಗೆಳತಿ ಹತ್ತನೇ ಕ್ಲಾಸಿನ ಸಾವಿತ್ರಿ ಜೊತೆ ಆಡುವಾಗ ಸಾವಿತ್ರಿ ಅವಳನ್ನ ಶಾಲೆಯ ಎರಡನೇಯ ಅಂತಸ್ತಿನಲ್ಲಿರುವ ಕಟ್ಟೆಯ ಮೇಲೆ ಕೂಡ್ರಿಸಿ ಮುದ್ದು ಮಾಡೋವಾಗ ಯಾರೋ ಸಾವಿತ್ರಿ ಅಂತ ಕೂಗಿದಾಗ ತಿರುಗಿನೋಡೊಕೆ ಅಂತ ಆಸರೆ ಅಂತ ಹಿಡಿದಿದ್ದ ಕೈ ಬಿಟ್ಟಾಗ ಶಾಂತಿ ಹೈದಿನೈದು ಅಡಿಯಿಂದ ಕೆಳಗೆ ,,,,,,,,,,,, ಅಷ್ಟೇ ಅವಳಿಗೆ ಗೊತ್ತಾಗಿದ್ದು ತಿರುಗಿ ಅವಳಿಗೆ ಎಚ್ಚರವಾದಾಗ ತನ್ನ ಮನೆಯಲ್ಲಿ ಇದ್ಲು ಅವ್ವ ಬ್ಯಾಡ ಅಂದ್ರು ಶಾಂತಿ ಮನೆಗೆ ಹೊದ್ರೆ ಅಲ್ಲಿ ಶಾಂತಿ ಅಮ್ಮ ಮಗಳನ್ನ ಕೊಂದ ರಾಕ್ಷಸಿ ಅನ್ನೊ ರೀತಿಲಿ ನೋಡಿದ್ರೆ ಶಾಂತಿ ಅಪ್ಪ ನಿಂದೇನೂ ತಪ್ಪಿಲ್ಲ ಅಂತ ಸಮಾಧಾನ ಮಾತು ಹೇಳಿ ಸುಮ್ಮನಾದರು
ಮನೆ ಹೋರಗೆ ಶಾಲೆ ನಡೆಸುವ ದೊಡ್ಡ ಜನ ತಪ್ಪು ನಮ್ಮ ಕಡೆಯಿಂದನೇ ಆಗಿರೊದು ನಾವು ಅದಕ್ಕೆ ಶಾಂತಿ ಮನೆಯವರಿಗೆ ಒಂದು ಲಕ್ಷ ಕೊಡುವ ಭರವಸೆ ಪತ್ರಿಕೆಗೆ ನೀಡ್ತಾ ಇದ್ರು,ನಮ್ಮೂರಿನ ಕಾರ್ಪೋರೆಟ್ ರಾಜ್ಯದ ಶಿಕ್ಷಣ ಮಂತ್ರಿ ಎಲ್ಲಾ ಬಂದಿದ್ರು ಕಾರ್ಪೋರೆಟಗೆ ಪೆಪರನಲ್ಲಿ ಪೊಟೋ ಬರೊ ಸಂಭ್ರಮ ಇತ್ತ ಕಡೆ ಮಂತ್ರಿಗಳ ಇನ್ನು ಮೇಲೆ ಈ ತರಹದ ಘಟನೆಗಳು ನಡಿದಿರೊ ಹಾಗೆ ನೋಡಿಕೊಳ್ಳುತ್ತೆವೆ ಎಂಬ ಭರವಸೆ, ಇವರಿಗೆಲ್ಲಾ ಯಾವುದಾದರು ಸುರಕ್ಷಾ ಕೆಲಸ ವಾಗಬೇಕಾದರೆ ಅಲ್ಲಿ ಒಂದು ಹೆಣ ಬಿಳಲೆಬೇಕು,
ಅಲ್ಲಿ ಶಾಲೆಯ ಹತ್ತಿರ ನಮ್ಮೂರಿನ ಒಬ್ಬ ಮಾಜಿ ಅದಾಗಲೆ ಶಾಂತಿಯ ಆತ್ಮಕ್ಕೆ ಶಾಂತಿ ಕೊರಿ ಉಪವಾಸ ಕುಳಿತಿದ್ದ ಅವನು ಈಗೀಂದಲೇ ಮುಂದಿನ ಚುನಾವಣೆಗೆ ತಯ್ಯಾರಿ ನಡೆಸಿದವನ ತರಹ ಆಡ್ತಿದಾನೆ,
ಹೀಗೆ ಇಲ್ಲಿ ಹೊರಪ್ರಪಂಚದಲ್ಲಿ ಎಲ್ಲರೂ ನಾಟಕ ಆಡುವಾಗ ಅಲ್ಲಿ ಒಳಗೆ ಶಾಂತಿ ನೆಮ್ಮದಿಯಿಂದ ಮಲಗಿದ್ದಳು,
ಅಷ್ಟೋತ್ತಿಗೆ ಯಾರೋ ಕೂಗಿದ್ರು ಕೂಸಿನ ಹೆಣಾ ಎತ್ರೊ ವ್ಯಾಳೆ ಭಾಳ ಅಗೆದ ಅಂತ
ಕಾರ್ಪೋರೆಟರು ಶಿಕ್ಷಣಮಂತ್ರಿ ಎಲ್ಲಾ ಮುಗಿಸಿ ಕಾರಿನಲ್ಲಿ ಕುಳಿತಾಗ ಪೇಪರಿನವರು ಮತ್ತೆ ಯಾವಾಗಾ ಬರ್ತಿರಾ ಸಾರ್ ನಮ್ಮೂರಿಗೆ ಕೇಳಿದಾಗ ಬೇರೆ ಯಾರೋ ಉತ್ತರಿಸಿದ್ದರು
ಇನ್ನೊಂದ ಹೆಣಾ ಬಿದ್ದ ಮ್ಯಾಲೆ