Wednesday, July 11, 2007

ಪ್ರಕಾಶ ಶೆಟ್ಟರ ಕುಂಚದಲ್ಲಿ ನಾ

ಮೊನ್ನೆ ಭಾನುವಾರ ಪೋರಂ ಎಂಬ ಮಾಯಾಲೋಕಕ್ಕೆ( ಜೇಬು ಕತ್ತರಿಸುವ) ಹೋದಾಗ ನಮ್ಮ ಚಿತ್ರಕಾರ ಪ್ರಕಾಶ ಶೆಟ್ಟಿಯವರ ಕುಂಚದಲ್ಲಿ ನಾ ಕಂಡದ್ದು, ಬಿಡುವಿಲ್ಲದ ಬೆಂಗಳೂರು ಅದರ ಜೊತೆ ಹ್ಯಾಂವಕ್ಕೆ ಬಿದ್ದಿರೊ ನಾವು, ಇವುಗಳ ನಡುವೆ ಸಿಗುವ ಇಂತಹ ಎಷ್ಟೊ ಸಣ್ಣ ಸಣ್ಣ ಕ್ಷಣಗಳನ್ನ ಹಾಗೆ ಕಳೆದುಕೊಂಡು ಬಿಡುತ್ತೆವೆ , ಅಂತಹ ಒಂದು ಸಂತೋಷದ ಕ್ಷಣ ನನ್ನದಾಗಿಸಿದ ಮಿತ್ರ ರಫೀಕನಿಗೆ ಮತ್ತು ಚಿತ್ರಕಾರ ಪ್ರಕಾಶ ಶೆಟ್ಟರಿಗೆ ನನ್ನ ದನ್ಯವಾದಗಳು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನಿನ್ನ ನಿರ್ಭಂದನೆಗಳ
ನನ್ನ ಕಳವಳಗಳ ನಡುವೆ
ನನ್ನ ಹಣೆಬರಹವೆ ನನಗೆ ಶತ್ರುವಾಯಿತೆ
ನಾನಾದರೂ ಎನೆಂದು ಹೇಳಲಿ ನನ್ನೊಲವೆ
ನನ್ನ ಮನದಿಂದ ನೀ ದೂರಾದ ಮೇಲೆ,
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನನ್ನಸೆಗಳೆಲ್ಲಾ ಮಣ್ಣಾಗಿ
ಕನಸುಗಳೆಲ್ಲಾ ಚೂರಾಗಿ
ಬದುಕಿರುವೆ ನಿನ್ನಿಂದ ದೂರಾಗಿ
ಸಾಯಲು ಸಾದ್ಯವಿಲ್ಲಾ ನಿನ್ನ ನೆನಪಿನಿಂದಾಗಿ
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,




ಮಹೇಶ ಎಸ್ ಎಲ್

ಹಂಗಾರ ನೀ ಹೋಗ್

ಈ ಮಾತನ್ನ ಅವನು ಯಾವುದೆ ಉದ್ವೇಗವಿಲ್ಲದೆ ಹುಟ್ಟಿದ ಆ ಇಪ್ಪತೈದು ವಸಂತಗಳಲ್ಲಿ ಆ ರೀತಿ ಸಮಾಧಾನವಾಗಿ ಹೇಳಿದ್ದ ಹಂಗಾರ್ ನೀ ಹೋಗ್
ಅವನಿಗೆ ತನ್ನ ಈಗಿನ ಪರಿಸ್ಥಿತಿಗಿಂತ ಅದನ್ನ ತಂದೊಡ್ಡಿದ ದರಿದ್ರ ಜಾತಿ ಪ್ರಪಂಚದೆಡೆಗೆ ಒಂದು ಸಿಟ್ಟು ಅನ್ನೊದಕ್ಕಿಂತ ದಿವ್ಯ ನಿರ್ಲಕ್ಶತನ ಬಂದು ಬಿಟ್ಟಿತ್ತು
ಅವನ ಆಗಿನ ಸ್ಥಿತಿಗೆ ಒಂದು ರೀತಿ ಅವನೆ ಕಾರಣ ಅವನೂ ಸಹ ಜಗತ್ತಿನ ಸಮಸ್ತ ಜೀವಿಗಳಂತೆ ಪ್ರೀತಿಯ ಬೆಂಬತ್ತಿದ್ದ ಅವಳು ಸಹ ಅದನ್ನೆ ಮಾಡಿದ್ಲು ಅದು ಐದು ಸಂವತ್ಸರ ಗಳಿಂದ ನಿರಂತರ ಸಾಗಿದ ಒಲವಿನ ಪಯಣ,,,,
ಅದರಲ್ಲಿ ಸ್ವಲ್ಪ ಸಿಟ್ಟು, ಚೂರು ಬಿಗುಮಾನ ಮುಂದೆ ಬರುವ ಎಲ್ಲಾ ಜನ್ಮಕ್ಕೂ ಕೊಟ್ಟರೂ ಮುಗಿಯಲಾರದ ಒಲವು, ಎಲ್ಲಾ ಇತ್ತು ಆದರೂ ಜಾತಿ ಸುಳಿಗೆ ಸಿಕ್ಕ ಪ್ರೀತಿಯ ದೋಣಿ ಐದೇ ಸಂವತ್ಸರಕ್ಕೆ ಮುಳುಗಿ ಹೋಗಿತ್ತು.

ಕುವೆಂಪು ಹೇಳಿದ್ರು __
ಜಾತಿ ಸುಡೊ ಮಂತ್ರ ಕಿಡಿ
ಪ್ರೀತಿ ಅಂತ
ಆದ್ರೆ ನಮ್ಮ ಜಾತಿಯ ಭೂತಗಳು ಅದನ್ನ ಮಾಡಿದ್ದು
ಪ್ರೀತಿ ಸುಡೊ ಮಂತ್ರ ಕಿಡಿ
ಜಾತಿ ಅಂತ

ಕಟ್ಟಿಕೊಂಡ ಕನಸುಗಳು , ಒಬ್ಬ್ಬರಿಗೊಬ್ಬರು ಕೊಟ್ಟುಕೊಂಡ ಆಶ್ವಾಸನೆಗಳು, ಬರೆದುಕೊಂಡ ಪ್ರೀತಿಯ ಪತ್ರಗಳು , ಒಲವಿನ ಹಾಡು ತಿರುಗಾಡಿದ ಬೀದಿಗಳು , ಒಟ್ಟಿಗೆ ಕುಳಿತು ಮೊದಲು ಹುಟ್ಟುವ ಹೆಣ್ಣು ಮಗುವಿಗೆ ಇಡಬೇಕಾದ ಹೆಸರು.ಇದೆಲ್ಲವನ್ನು ಒಂದೆ ಉಸಿರಲ್ಲಿ ಕೊಚ್ಚಿ ಹಾಕಿದ್ದು ಜಾತಿ ಎಂಬ ಪಾಪಾತ್ಮ!!!!!!!

ಹುಡುಗಾ ಪ್ರೀತ್ಸ್ ತಿಯಾ ಅಂತ ಕೇಳ್ದಾ
ಹುಡುಗಿ ಹೇಳ್ತು ಹೂಂ ಜಾತಿನಾ!!

ಅದಕ್ಕೆ ಹುಡುಗಾ ಹೇಳಿದ್ದು ಹಂಗಾರ್ ನೀ ಹೋಗ್
ಅಂತ
ಗೆಳೆಯರೆ ಕೊನೆಯ ಒಂದು ಮಾತು
ಯಾವ ಕಾಲದಲ್ಲಿ ಇದಾರೆ ಇನ್ನು ಇವರು ಜಾತಿ ಬಗ್ಗೆ ಮಾತಾಡ್ತಾರೆ ಇವರ ಪೂಜೆಯ ವಿಧಾನ ವನ್ನ ಇವರದೆ ಮನೆಯಿಂದ ಹೋರಗೆ ಹೋಗುವ ಇವರ ಕಂದ ಬಾರಲ್ಲಿ ಅದರ ಅರ್ಥ ಹೆಳ್ತಾ ಕೂತಿರುತ್ತೆ
ಜಾತಿ ಜಿಂದಾಬಾದ್