Wednesday, July 11, 2007

ಹಂಗಾರ ನೀ ಹೋಗ್

ಈ ಮಾತನ್ನ ಅವನು ಯಾವುದೆ ಉದ್ವೇಗವಿಲ್ಲದೆ ಹುಟ್ಟಿದ ಆ ಇಪ್ಪತೈದು ವಸಂತಗಳಲ್ಲಿ ಆ ರೀತಿ ಸಮಾಧಾನವಾಗಿ ಹೇಳಿದ್ದ ಹಂಗಾರ್ ನೀ ಹೋಗ್
ಅವನಿಗೆ ತನ್ನ ಈಗಿನ ಪರಿಸ್ಥಿತಿಗಿಂತ ಅದನ್ನ ತಂದೊಡ್ಡಿದ ದರಿದ್ರ ಜಾತಿ ಪ್ರಪಂಚದೆಡೆಗೆ ಒಂದು ಸಿಟ್ಟು ಅನ್ನೊದಕ್ಕಿಂತ ದಿವ್ಯ ನಿರ್ಲಕ್ಶತನ ಬಂದು ಬಿಟ್ಟಿತ್ತು
ಅವನ ಆಗಿನ ಸ್ಥಿತಿಗೆ ಒಂದು ರೀತಿ ಅವನೆ ಕಾರಣ ಅವನೂ ಸಹ ಜಗತ್ತಿನ ಸಮಸ್ತ ಜೀವಿಗಳಂತೆ ಪ್ರೀತಿಯ ಬೆಂಬತ್ತಿದ್ದ ಅವಳು ಸಹ ಅದನ್ನೆ ಮಾಡಿದ್ಲು ಅದು ಐದು ಸಂವತ್ಸರ ಗಳಿಂದ ನಿರಂತರ ಸಾಗಿದ ಒಲವಿನ ಪಯಣ,,,,
ಅದರಲ್ಲಿ ಸ್ವಲ್ಪ ಸಿಟ್ಟು, ಚೂರು ಬಿಗುಮಾನ ಮುಂದೆ ಬರುವ ಎಲ್ಲಾ ಜನ್ಮಕ್ಕೂ ಕೊಟ್ಟರೂ ಮುಗಿಯಲಾರದ ಒಲವು, ಎಲ್ಲಾ ಇತ್ತು ಆದರೂ ಜಾತಿ ಸುಳಿಗೆ ಸಿಕ್ಕ ಪ್ರೀತಿಯ ದೋಣಿ ಐದೇ ಸಂವತ್ಸರಕ್ಕೆ ಮುಳುಗಿ ಹೋಗಿತ್ತು.

ಕುವೆಂಪು ಹೇಳಿದ್ರು __
ಜಾತಿ ಸುಡೊ ಮಂತ್ರ ಕಿಡಿ
ಪ್ರೀತಿ ಅಂತ
ಆದ್ರೆ ನಮ್ಮ ಜಾತಿಯ ಭೂತಗಳು ಅದನ್ನ ಮಾಡಿದ್ದು
ಪ್ರೀತಿ ಸುಡೊ ಮಂತ್ರ ಕಿಡಿ
ಜಾತಿ ಅಂತ

ಕಟ್ಟಿಕೊಂಡ ಕನಸುಗಳು , ಒಬ್ಬ್ಬರಿಗೊಬ್ಬರು ಕೊಟ್ಟುಕೊಂಡ ಆಶ್ವಾಸನೆಗಳು, ಬರೆದುಕೊಂಡ ಪ್ರೀತಿಯ ಪತ್ರಗಳು , ಒಲವಿನ ಹಾಡು ತಿರುಗಾಡಿದ ಬೀದಿಗಳು , ಒಟ್ಟಿಗೆ ಕುಳಿತು ಮೊದಲು ಹುಟ್ಟುವ ಹೆಣ್ಣು ಮಗುವಿಗೆ ಇಡಬೇಕಾದ ಹೆಸರು.ಇದೆಲ್ಲವನ್ನು ಒಂದೆ ಉಸಿರಲ್ಲಿ ಕೊಚ್ಚಿ ಹಾಕಿದ್ದು ಜಾತಿ ಎಂಬ ಪಾಪಾತ್ಮ!!!!!!!

ಹುಡುಗಾ ಪ್ರೀತ್ಸ್ ತಿಯಾ ಅಂತ ಕೇಳ್ದಾ
ಹುಡುಗಿ ಹೇಳ್ತು ಹೂಂ ಜಾತಿನಾ!!

ಅದಕ್ಕೆ ಹುಡುಗಾ ಹೇಳಿದ್ದು ಹಂಗಾರ್ ನೀ ಹೋಗ್
ಅಂತ
ಗೆಳೆಯರೆ ಕೊನೆಯ ಒಂದು ಮಾತು
ಯಾವ ಕಾಲದಲ್ಲಿ ಇದಾರೆ ಇನ್ನು ಇವರು ಜಾತಿ ಬಗ್ಗೆ ಮಾತಾಡ್ತಾರೆ ಇವರ ಪೂಜೆಯ ವಿಧಾನ ವನ್ನ ಇವರದೆ ಮನೆಯಿಂದ ಹೋರಗೆ ಹೋಗುವ ಇವರ ಕಂದ ಬಾರಲ್ಲಿ ಅದರ ಅರ್ಥ ಹೆಳ್ತಾ ಕೂತಿರುತ್ತೆ
ಜಾತಿ ಜಿಂದಾಬಾದ್

No comments: