Monday, July 16, 2007

ನಾನ ಕತೆ ಬರೆದ್ರೆ




ಕತಿ ಬರೆಬೇಕು ಅಂತ ಕೂತ್ರ ಬರೆ ಹೀಂಗ ಆಗತೆತಿ ಯಾರರ ಬಂದ ಇಲ್ಲದ ಸುದ್ದಿ ಹೇಳಿ ತಲಿ ತಿನ್ನತಿರ್ತಾರ,ಮೊನ್ನೆನು ಹೀಂಗ ಆತ ಹುಬ್ಬಳ್ಳಿಯಿಂದ ಬೆಂಗ್ಳೂರಿಗೆ ಬರಾಕತ್ತಿದ್ದೆ ರಾತ್ರಿ ಬಸ್ಸನ್ಯಾಗ ಕುಂತ್ರ ಏನರ ಹೋಳಿತೆತಿ ಯಾರು ಗುರ್ತೆನೆರೂ ಇರಂಗಿಲ್ಲಾಅಂತ ಆದ್ರ ಆಗಿದ್ದ ಬ್ಯಾರೆ, ಬಸ್ಸಿನ್ಯಾಂವ ಹೊಸಾ ಬಸ್ಟ್ಯಾಂಡನಿಂದ ಹಳೇಬಸ್ಟ್ಯಾಂಡ ಒಳಗ ಬಂದ ಅರ್ಧಾತಾಸ ಬೆಂಗ್ಳೂರ ಬೆಂಗ್ಳೂರ ಹುಚ್ಚ ಹಿಡ್ದೊರಂಗ ವದರಾಕ ಶುರು ಮಾಡಿದಾ ನಾಕ್ ನಾಕ ಮಂದಿ ಹತ್ತಿದ್ರು ಅಲ್ಲಿಂದ ಬಸ್ ಚೆನ್ನಮ್ಮಾಸರ್ಕಲ್ಲಿಗೆ ಒಂದ ರೌಂಡ ಹಾಕಿ ಬಂಕಾಪುರ ಚೌಕನ್ಯಾಗ ಮತ್ತ ನಿಂತು....... ಅಲ್ಲಿ ಒಂದ ಯಾಡ ಎಣ್ಣಿ ಗಿರಾಕಿ ಹತ್ತಿ ನನ್ನ ಮುಂದಿನ ಸೀಟಿಗೆ ಕುಂತ್ರ , ಮುಂದಿನ ಹತ್ತ ನಿಮಿಷಕ್ಕ ಲೈಟೆಲ್ಲಾ ಆರಿದ ಮ್ಯಾಲೆ ನಾ ಮತ್ತ ತಲ್ಯಾಗ ಕತಿ (ಕತೆ)ತುಂಬ್ಕೊಂಡ ಕುಂತ್ಯಾ ಒಂದ ಎಳಿ ಸಿಕ್ತು ಅದನ್ನ ಹೇಳ್ತಿನಿ ಈಗ.




ಸ್ವಪ್ನಾ ಮುಂಜಾನೆ ಮನೆಗೆ ರಂಗೋಲಿ ಹಾಕೋವಾಗ ದುತ್ತಂತ ಪ್ರತ್ಯಕ್ಷವಾಗ್ತಾನೆ ಯಾರೋ ಎನೋ, ಬೀದಿಲಿ ಯಾರಾದ್ರು ಸಂಶಯ ಬಂದು ಕೇಳಿದ್ರೆ ಹೇಳೊಕೆ ಹಾಕಿಕೊಂಡಿರುವ ಜಾಗಿಂಗ ಡ್ರೆಸ್ ಇದೆ ಆಮೇಲೆ ಯಾರೂ ಕೇಳೊದು ಇಲಾ ಬಿಡಿ ಇತ್ತಿಚಿಗೆ ಮನೆ ಬೀದಿ ಯಾವ್ಯ್ದು ಮಾರ್ಕೆಟ ಬೀದಿ ಯಾವುದು ಅಂತ ಹೇಳೊಕೆ ಆಗದೆ ಇರೋ ಅಷ್ಟು ನಮ್ಮ ಬೆಂಗಳೂರು ಬೆಳೆದಿದೆ, ಅವನಿಗೆ ಬಯ್ದು ಕಳಿಸೋಕು ಮನಸ್ಸಿಲ ಇವಳಿಗೆ ಅಷ್ಟೊಂದು ಚೆಂದವಾಗಿದಾನೆ ಹೀಗೆ ಸುಮಾರು ದಿನ ನಡೆಯಿತು ಅವನು ಬಂದು ನಿಲ್ಲುತ್ತಿದ್ದನೆ ವಿನಹ ಯಾವತ್ತು ಮಾತನಾಡಿಸುವ ಧೈರ್ಯ ಮಾಡಿರಲಿಲ್ಲ ಇವಳೆ ಆ ಕೆಲಸ ಮಾಡೊ ನಿರ್ಧಾರ ತೆಗೆದುಕೊಂಡು ಮಾರನೆ ದಿನ ಕೇಳೇ ಬಿಟ್ಲು ಏನಾದ್ರೂ ಹೇಳಬೇಕಾ??? ಈ ಬೆಪ್ಪ ಎನಿಲ್ಲಾ ನೀವು ರಂಗೋಲೆ ಚೆನ್ನಾಗಿ ಬಿಡಿಸುತ್ತಿರಾ ಅದಕ್ಕೆ ಸುಮ್ಮನೆ........................................




ಅಷ್ಟೊತ್ತಿಗೆ ಬಸ್ಸು ರಾಣೆಬೆನ್ನೂರ ಮುಟ್ಟಿತ್ತು ಕಂಡಕ್ಟರ ಮತ್ತ ಒದರಾಕ ಶುರು ಮಾಡಿದ್ದಕ್ಕ ನನ್ನ ಕತಿ ಅರ್ಧಕ್ಕ ನಿಂತು, ಕತಿ ಮುಂದವರಸೊದ ಹೆಂಗ ಅಂತ ವಿಚಾರ ಮಾಡೊವಾಗ ಚಳಗೆರಿ ಹತ್ರ ಆಗಿತ್ತ ಡ್ರೈವರ್ ಬ್ರಿಜ್ ಮ್ಯಾಲಿಂದ ಹೋಗುದು ಅಂತ ಇಲ್ಲಾ ಕೆಳಗನಿಂದ ಅಂತ ಚಳ್ಗೇರಿ್ ಕ್ರಾಸ್ ಇಳ್ಯಾಂವ ಜಿದ್ದ ಕಡಿಗೆ ದ್ರೈವರನ ಬ್ರಿಜ್ ಕೆಳಗ ಒಯ್ದ ನಿಲ್ಲಿಸಿದಾ ಇಳಿಯಂವಾ ಇಳದ ಅಲ್ಲಿಂದ ಇನ್ನೊಬ್ಬ ಹತ್ತ್ಕೊಂಡ ಬಸ್ ಮುಂದ ಹೊಂಟಿತ್ತು ಅಷ್ಟ್ರಾಗ ಹಿಂದ ಕೂಂತವ್ರ ಚಾಲು ಮಾಡಿದ್ರ ಬೇಕಂತ ಮಾಡ್ತಾರ್ರಿ ಟೈಮ್ ಸೆನ್ಸ್ ಇಲ್ಲ ಮಂದಿಗೆ ಇಷ್ಟ ಹೇಳಿದ್ದ ತಡ ಚಳ್ಗೇರಿ ಕ್ರಾಸ್ ನಿಂದ ಹತ್ತಿದ್ದ ಮನಷ್ಯಾ ಜಮದಗ್ನಿ ಅವತಾರಾ ತಾಳೇ ಬಿಟ್ಟ ಹೇಂಗ ಅಂತೀರಿ ಸಾಯೇಬ್ರ ಅಲ್ಲಿ ಸ್ಟಾಪ್ ಐತಿ ಅಂತ ನಿಂತಾನ ಇಲ್ಲಾಂದ್ರ ನಾನರ ಯಾಕ ಅಲ್ಲಿ ರಾತ್ರಿ ಹೊತ್ತನ್ಯಾಗ ಬಸ್ಸಿಗೆ ಕಾಯ್ಕೊಂತ ನಿಂದ್ರತಿದ್ದೆ ಮಾತ್ಡಾತಿರಿ ಹಂಗ ಇದ ಶಾಂತ ಆತು ಅನ್ನೊವಾಗ ಇನ್ನೊಬ್ಬ ಶುರು ಮಾಡಿದಾ ಇಂವಾ ಇಷ್ಟ ಮೆಲ್ಲಗ ಹೊದ್ರ ನಾವ್ ಬೆಂಗ್ಳೂರ ಮುಟ್ಟಿದಂಗ ಆತು,,,,,,,ಅದಕ್ಕ ಒಂದ ನಾಕ ದನಿ ಸೇರಿದ್ವು ಇದು ಮುಗ್ಯಾಕ ಬಂತು ಅನ್ನೊ ಹೊತ್ತ್ನ್ಯಾಗ ಮುಂದ ಡ್ರೈವರ್ ಬಾಜು ಒಂದ ಜಗಳ ಶುರು ಅವ್ರ ಎದಕ್ಕ ಹೊಡ್ದಾಕನೊತಾರ ಅಂತ ಯಾರಿಗೂ ಬ್ಂಗ್ಳೂರ ಮಟ್ಟೊಮಟ ತಿಳಿಲೆ ಇಲ್ಲಾ


ಒಬ್ಬಂವಾ ಸಾಕ ಸುಮ್ಮನಾಗ ಅನ್ನೊಂವಾ ಇನ್ನೊಬ್ಬಾಂವ ಬಾ ತೊರಸ ಬಾಲೇ ಮಗನ ಅನ್ನೊಂವಾ ತಲಿ ಅನ್ನೊದು ಏನ ಕೇಳ್ತಿರಿ


ಅಷ್ಟೊತ್ತಿಗೆ ನನ್ನ ಕತಿ (ಕತೆ) ಅತ್ಮಹತ್ಯ ಮಾಡ್ಕೊಂಡಿತ್ತ ಅದಕ ನಮ್ಮ್ ಲೇಖಕರು ಹೇಳೊದು ಕಥೇ ಎಲ್ಲರಿಗೂ ಸಿದ್ದಿಸುವುದಿಲ್ಲ ಅಂತ, ಮುಂದಿನ ಸಾರಿನರ ಪೂರ್ತಿ ಕತಿ ಬರಿಯೊ ಪ್ರಯತ್ನ ಮಾಡ್ತೆನಿ


1 comment:

Anonymous said...

Mahesh, the script is not clear. I could not read it. I have Nudi istalled.

Aasif