Friday, July 13, 2007

ನೆನಪುಗಳ ಜಾತ್ರೆ


ಈ ನೆನನಪುಗಳು ಮನುಷ್ಯನ ಎನರ್ಜಿಕ ಟಾನಿಕ್ಕು ಹೌದು ಮನಸಿನ ನೆಮ್ಮದಿ ಕದಡುವ ನಶೆಯು ಹೌದು.

ನಿತ್ಯ ಬದುಕಿನ ಜಂಜಾಟದಲ್ಲಿ ಕಳೆದು ಹೋಗುವ ನಮಗೆ ನೆನಪೆ ಅಲ್ಟಿಮೆಟ್ ಜೊತೆಗಾರ ನೆನಪುಗಳು ಇಲ್ಲದ ಮನುಷ್ಯ? ಕಲ್ಪನೆಗೂ ಸಾಧ್ಯವಿಲ್ಲಾ, ಅದಕ್ಕೆ ಇರಬೇಕು ನಮ್ಮ ಕವಿಗಳು ನಮಗೆ ನೆನಪಿನ ಗೀತೆಗಳ ಸರಮಾಲೆಯನ್ನೆ ನಿಡಿದ್ದಾರೆ.


ಅಮ್ಮನಿಗೆ ತನ್ನ ಕಂದಮೊದ್ಮೊದಲು ತೊದಲುತೊದಲಾಗಿ ಅಮ್ಮ ಅಂದದ್ದು ,ಅಂಬೆಗಾಲಿಟ್ಟು ಮನೆಯ ಹೊಸ್ತಿಲು ದಾಟಿದ್ದು, ಅವನಿಗೆ ಬಾನಂಗಳದ ಚಂದಿರನ ತೋರಿಸಿ ಕೈತುತ್ತು ತಿನ್ನಿಸಿದ್ದು, ಬಾಲವಾಡಿಗೆ ಹೋಗುವ ಮೊದಲ ದಿನ ಗಳಗಳನೆ ಅತ್ತದ್ದು ಒಂದಾ ಎರಡಾ..........


ಇವನಿಗೆ ಮೊದಲು ಸೈಕಲ್ ಕಲಿಯುವಾಗ ಆದ ಮಂಡಿಗಾಯ, ಅಪ್ಪನ ಧರ್ಮದೇಟು , ಪಕ್ಕದ ಮನೆಯ ಹುಡುಗನೊಂದಿಗೆ ಬುಗುರಿಗಾದ ಜಗಳ, ಮೊದಲು ಅವರ ಮನೆಗೇ ಬಣ್ಣದ ಟಿವಿ ಬಂದಾಗ ಅವನೊಂದಿಗೆ ಬೆಳೆಸಿದ ಗೆಳೆತನ, ಮೊದಲ ದಿನ ಹೈಸ್ಕೂಲಿಗೆ ಹೋದಾಗ ಆದ್ ಕಸಿವಿಸಿ ಅರ್ಥವೇ ತಿಳಿಯತಿದ್ದ ಮ್ಯಾಥ್ಸು,ಖೋ ಖೋ ಆಟದಲ್ಲಿ ಯಾವಾಗಲು ಬರುತ್ತಿದ್ದ ಫಸ್ಟ್ ಪ್ರೈಜು(ಆವಾಗ ಕ್ರಿಕೆಟ್ಟು ಎಲ್ಲಿತ್ತು),ಕನ್ನಡ ಮೇಷ್ಟ್ರ ಅದ್ಭುತ ವ್ಯಾಕರಣ,ಮುಂದಿನ ಬೆಂಚಿನ ಹುಡುಗಿಯ ಜಡೆ ಜಗ್ಗಿದ್ದಕ್ಕೆ ಬಿದ್ದ ಇಂಗ್ಲಿಷ ಸರ್ ವದೆಗಳು.


ಮುಂದೆ ಹೈಸ್ಕೂಲ ಮುಗಿಸಿ ಕಾಲೇಜಿಗೆ ಯುನಿಪಾರ್ಮ ಇಲ್ಲದೆನೆ ಹೋಗಬಹುದಲ್ಲ ಅನ್ನೊ ಸಂತೋಷ ಒಂದು ಕಡೆಯಾದರೆ ragging ಮಾಡ್ತಾರಾ ಅನ್ನೊ ಭಯ ಒಂದು ಕಡೆ, ಸ್ವಲ್ಪೆ ದಿನಗಳಲ್ಲಿ ನಾವೇ ಮತ್ತೊಬ್ಬರಿಗೆ ಹಿರಿಯರು ಹಾಕಿಕೊಟ್ಟ ದಾರಿ ಅಂತ ಅದೇ ragging ಮಾಡಿದ್ದು ,ಮೊಟ್ಟಮೊದಲು ಸಿಗರೇಟಿಗೆ ಮುತ್ತಿಟ್ಟಿದ್ದು, ಇದೆಲ್ಲ ಒಂದು ಕಡೆಯಾದರೆ ಅವಳ ನೆನಪು ಇದೆಯಲ್ಲಾ ಅದನ್ನ ಹ್ಯಾಗೆ


ಅವಳನ್ನು ಮೊದಲ ಸಾರಿ ನೋಡಿದಾಗಿನ ಪುಳುಕ, ಅವಳ ಕೈಗಿತ್ತ ಮೊದಲ ಪ್ರೇಮಪತ್ರ, ಅವಳಿಂದ ದೊರೆತ ಒಪ್ಪಿಗೆ ಕಾಲೇಜಿನ ಗುಲಾಬಿ ತೋಟದಲ್ಲಿ ಎರಡೆ ಸೀಟುಗಳ ಬೆಂಚಿನಲ್ಲಿ ಕುಳಿತಾಗ ಅವಳು ಮೊದಲು ಮುತ್ತಿಟ್ಟು ಎದೆಯಲ್ಲಿ ಗುಬ್ಬಚ್ಚಿಯ ಹಾಗೆ ಮುಖ ಹುದುಗಿಸಿದಾಗ ಆದ ರೋಮಾಂಚನ, ಅದಕ್ಕೆ ಸಾಕ್ಷಿಯಾದ ಸಂಪಿಗೆ ಗಿಡದ ಕಂಪು, ಅವಳು ಕಾರಣ ಕೊಡದೆನೇ ಕೈಕೊಡವಿಕೊಂಡು ಎದ್ದು ಹೋದದ್ದು ,ಇದೆಲ್ಲದರ ಫಲಿತಾಂಶವೆಂಬಂತೆ ಆ ವರ್ಷದ ಎಲ್ಲಾ ವಿಷಯದಲ್ಲೂ ಫೇಲಾದದ್ದು, ಎಲ್ಲಾ ಕೊಡವಿಕೊಂಡು ಹೊಸ ಕನಸು ಅರಸಿ ಮೊದಲ ಕೆಲಸಕ್ಕೆ ಸೇರಿದ್ದು.

ನೆನಪುಗಳು ನಿರಂತರ


Thursday, July 12, 2007

ನಾ ಓದಿದ ಜೋಗಿ ಕಥೆಗಳು




ನಿನ್ನೆ ಜೋಗಿಯವರ ಹೊಸ ಪುಸ್ತಕ <ಜೋಗಿಯ ಕಥೆಗಳು> ಓದುತ್ತಿರುವಂತೆ ಅನ್ನಿಸಿದ್ದು ಅಕ್ಷರಗಳಲ್ಲಿ,


ಸುಬ್ಬಣ್ಣ-;ಹತಾಶೆ ಅಹಂಕಾರ ಅವ್ಯಕ್ತ ಭಯ ಹೊಟ್ಟೆಕಿಚ್ಚು ನಮ್ಮೆಲ್ಲರಲ್ಲೂ ಇವೆ ಅದನ್ನ ಜೋಗಿಯವರು ಸುಬ್ಬಣ್ಣನ ಮೂಲಕ?


ಇಲ್ಲಿ ಭೀಮಸೇನಜೋಶಿಯವರು ಒಮ್ಮೆ ಅಭಿಮಾನವಾದರೆ ಮತ್ತೊಮ್ಮೆ ಹೊಟ್ಟೆಕಿಚ್ಚಿನ ಹರದಾರಿಯಾಗುತ್ತಾರೆ ಸುಬ್ಬಣ್ಣಹುಚ್ಚುಖೋಡಿಮನಸುಗಳಿಗೆ ಹಿಡಿದ ಕೈಗನ್ನಡಿಯಾ?




ಗೋವಿಂದ ವಿಠಲ ಹರಿ ಹರಿ-; ದೇವರು ನಂಬಿಕೆ ಮನುಷ್ಯ ಮತ್ತು ಪ್ರೀತಿ , ಜೋಗಿಯವರು ಇಲ್ಲಿ ಇದನ್ನು ಅದ್ಭುತವಾಗಿ ಸಮ್ಮಿಲನಗೊಳಿಸಿದ್ದಾರೆ ನನಗನ್ನಿಸಿದ್ದು ಇಲ್ಲಿ ಮನುಷ್ಯ ದೇವರನ್ನು ಒಂದು ಕೆಲಸದಲ್ಲಿ ಕಂಡುಕೊಳ್ಳುವ ಪ್ರಯತ್ನವಾ .


ದೇವರು ಪ್ರೀತಿ ಇಲ್ಲವೆಂದ ಜೋಶಿಯವರು ಕರ್ತವ್ಯದ ನೆಪದಲ್ಲಿ ಎರಡನ್ನು ಒಂದೇ ಗುಕ್ಕಿನಲ್ಲಿ ಒಪ್ಪಿಕೊಳ್ಳುತ್ತಾರೆ ಜೋಗಿಯವರಿಗೆ ಸಲಾಂ




ವಿಶ್ವಸುಂದರಿ-; ಮನಸಿನ ಭಾವನೆಗಳೊಂದಿಗೆ ಜೋಗಿ ಸರ್ ಲೀಖನಿ ಅದ್ಭುತವಾಗಿ ಮಾತನಾಡಿದೆ.




ಇನ್ನೊಬ್ಬ-; ಊಹೂಂ ಇದು ನನ್ನ ಯೋಚನಾಲಹರಿಗೆ ನಿಲುಕದ್ದು, ಸಂಬಂಧಗಳ ಗಾಢತೆಯಾ? ಸ್ನೇಹಲೋಕದ ನಿಗೂಢತೆಯಾ?


ತನ್ನನ್ನೆ ತಾನು ಕಂಡುಕೊಳ್ಳುವ ವಿಚಿತ್ರ ಯತ್ನವಾ ಜೋಗಿ ಸರ್ ದಯವಿಟ್ಟು ಪರಿಹರಿಸಿ.




ಕನ್ನಡಿಯೊಳಗೆ ಗಳಗನಾಥರಿಲ್ಲ-; ಹಾಗಿದ್ದರೆ(ನನಗಷ್ಟೆ ಬದುಕಿದ್ದು ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೆನಾ) ಗಮನವಿಟ್ಟು ಓದದಿದ್ದರೆ ಎಂದಿಗೂ ಅರ್ಥವಾಗದ ಮಾತು ಅನ್ನಿಸುತ್ತೆ, ಮನುಷ್ಯನ ಸ್ವಾರ್ಥಕ್ಕೆ ಕೊಡಬಹುದಾದ ಅತ್ಯುತ್ತಮ ಉದಾಹರಣೆ


ಭ್ರಮಾಲೋಕದಲ್ಲಿ ವಿಹರಿಸುವಾಗಲೆ ವಾಸ್ತವತೆಯೆಡೆಗೆ ಬದುಕು ಒದ್ದೊಡಿಸುವುದು ಅಂದ್ರೆ ಇದೇನಾ...... ನಮ್ಮ ಕಿಂದರಿಜೋಗಿಯ ಜೋಳಿಗೆಯಲ್ಲಿ ಇನ್ನು ಎನೇನು ಅಡಗಿದೆಯೊ

ಶಾಪಿಂಗ


ಒಂದು ಕಾಲ ಇತ್ತು ಹಬ್ಬ ಬಂದ್ರೆ ಬಟ್ಟೆ, ತಿಂಗಳಿಗೆ ಒಂದು ಸಾರಿ ಮನೆಗೆ ಕಿರಾಣಿ ಬರತಿತ್ತು, ಅದಕ್ಕಾಗಿ ನಮ್ಮೂರಿನ ಗುರುವಾರದ ಸಂತೆಗೊ ಅಥವಾ ಹುಬ್ಬಳ್ಳಿಯ ಶನಿವಾರದ ಸಂತೆಗೊ ಹೋಗುತ್ತಿದ್ದ ನೆನಪು, ಅಲ್ಲಿ ಮಾರವಾಡಿಯ ಅಂಗಡಿಯಲ್ಲಿ ಅಜ್ಜನಿಗೆ ಚಹಾ ನಮಗೆ ನಿಂಬಿಹುಳಿ ಪೆಪ್ಪರಮೆಂಟ್ ಎಲ್ಲಾ ಸಿಗೊದು ನಾವು ಬೇರೆ ಅಂಗಡಿಗೆ ಹೋಗಬಾರ್ದು ಅಂತ !!!, ನಾವು ಕೂಡ ಅಲ್ಲೆ ಐವತ್ತು ರೂಪಾಯಿ ಹೇಳಿದ ಬಟ್ಟೆ ಚೌಕಾಸಿ ಮಾಡಿ ಮೂವತ್ತು ರೂಪಾಯಿಗೆ ತಂದ್ವಿ ಅನ್ನೊ ಸುಳ್ಳೆ ಶ್ಯಾಣೆತನ , ತಿಂಗಳಿಗೆ ಒಂದು ಸಾರಿ ಸಿಗುತ್ತಿದ್ದ ಕಾಮತ್ ಹೋಟೆಲ್ ಮಸಾಲಾದೋಸೆಯ ಸೌಭಾಗ್ಯ ಎದುರಿಗೆ ಈದ್ಗಾಮೈದಾನದಲ್ಲಿ ದೊಂಬರಾಟದವರ ತರೆವಾರಿ ಕಸರತ್ತುಗಳು ನೋಡೊ ಸಂಭ್ರಮ…… ಇನ್ನು ಟೈಮು ಸಿಕ್ಕರೆ ಅಜ್ಜ ನಮ್ಮನ್ನ ಬಸ್ಟ್ಯಾಂಡ ಪಕ್ಕದಲ್ಲಿ ಇರೊ ಸುಜಾತಾ ಟಾಕಿಜಿನಲ್ಲಿ ಯಾವದಾದ್ರು ಅಣ್ಣಾವ್ರ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದ ನೆನಪು, ಇಂತಹ ಸಂಭ್ರಮಗಳ ಸರಮಾಲೆಗೆ ಖರ್ಚಾಗುತ್ತಿದಾದ್ದು ಐನುರು ಆಗತಿರಲಿಲ್ಲ.
ಆದ್ರೆ ಈಗ ಸಂಡೇ ಬಂದ್ರೆ ಶಾಪಿಂಗ್ ಮಾಲು ಅಲ್ಲಿ ಎನಿಲ್ಲ ಹೇಳಿ, ಸಾಲು ಸಾಲು ಝಘ ಮಘಿಸುವ ಸಾಲಂಗಡಿಗಳು ಎಲ್ಲಕ್ಕಿಂತ ಮೊದಲು ದ್ವಾರಬಾಗಿಲಿನಲ್ಲಿ ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ದೊಂಬರಾಟದ ಹೊಸ ರೂಪ, ಆಗ ಅವರು ಹೊಟ್ಟೆಹೊರೆಯೊಕೆ ಅಂತ ಬಿದಿಬದಿಲಿ ದೊಂಬರಾಟ ಆಡ್ತಿದ್ರು ಈಗ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಜಾಹಿರಾತಿನ ಪ್ರಚಾರಕ್ಕೆ ಶಾಪಿಂಗ ಬರುವ ಜನಗಳಿಂದ ಅದನ್ನ ಮಾಡಿಸುತ್ತವೆ, ಇನ್ನು ಒಳ್ಗಡೆ ಎನಾದ್ರು ಖರೀದಿಸಿ ಚೌಕಾಸಿ ಮಾಡೊಣ ಅಂದ್ರೆ ಪಕ್ಕದಲ್ಲಿ ಇರೊರು ನಮ್ಮನ್ನ ಆದಿಮಾನವರ ತರಹ ನೋಡೊದ್ರಲ್ಲಿ ಸಂದೇಹ ಬೇಡ ನಮ್ಮ ಮಾರವಾಡಿ ಅಂಗಡಿಲಿ ಇದೆ ಬಟ್ಟೆ ನೂರಕ್ಕೆ ಸಿಗತಿತ್ತು ಇಲ್ಲಿ ಅದಕ್ಕಿಂತ ಹತ್ತು ಪಟ್ಟ ಜಾಸ್ತಿ ಕೊಟ್ಟು ತೊಗಂಡ ಹೋಗಲೆಬೇಕು ಇಲ್ಲದಿದ್ರೆ ಪಕ್ಕದ ಮನೆಯವರಿಂದ ಶಾಪಿಂಗ್ ಹೋಗಿ ಹಾಗೆ ಬಂದ್ರು ಅನ್ನೊ ಅವಹೆಳನಕಾರಿ ಮಾತು ಮತ್ತು ಜೊತೆಗೆ ಬಂದಿರೊ ಜನಕ್ಕೆ ಎಂತದೊ ಕಸಿವಿಸಿ.
ಇನ್ನು ಹಸಿವೆಯಾಗಿ ಎನಾದ್ರೂ ಹೋಟಲ್ ಹುಡುಕಿದ್ರೆ ಅದು ನಮಗೆ ಸಿಗಲ್ಲ, ಅಲ್ಲೆನಿದ್ರು ಫಾಸ್ಟಫುಡ್ಡಗಳು ಅಲ್ಲಿ ನಮ್ಮ ದೋಸೆ ಕನಸು ಮಾತ್ರ ಅಲ್ಲೆನಿದ್ರು ಪಿಜ್ಜಾ, ಬರ್ಗರ್ ಕೆಂಟುಕಿ ಚಿಕನ್ನ ಅದು ಮಾಡಿದವರಿಗೆ ಪ್ರೀತಿ.
ಇದೆಲ್ಲಾ ಮುಗಿಸಿ ಹೋರ ಬರೊಣ್ ಅಂದ್ರೆ ಮೇಲೆ ಪಿ ವಿ ಅರ್ ಸಿನಿಮಾ ಕೈಬಿಸೆ ಕರಿತಾ ಇರುತ್ತೆ ಟಿಕೆಟ ದರ ಕೆವಲ ಐನೂರು (ಇನ್ನೂ ಊರಲ್ಲಿ ಆ ದುಡ್ಡಿಂದ ಒಂದು ಮಿಡ್ಲಕ್ಲಾಸ ಸಂಸಾರ ತಿಂಗಳಿಗೆ ಆಗೋ ಕಿರಾಣಿ ಕೊಂಡಕೊಬಹುದು ಆ ಮಾತು ಬೇರೆ)ನಾನ ಟೀಕೆಟ ತೆಗಿಯಲ್ಲಾ ಅಂದ್ರೆ ನಮ್ಮ ಜೋತೆ ಬಂದಿರೊಳು ತೆಗಿತಾಳೆ!! ಇದಕ್ಕಿಂತ ಬೇರೆ ಅವಮಾನ ಉಂಟಾ.
ಈಗ ಹೇಳಿ ಯಾವುದು ಚೆನ್ನ ಅಂತ ……..
ಆಗ ಐನೂರಲ್ಲಿ ಒಂದು ತಿಂಗಳ ಮನೆ ಸಾಮಾನು, ಸಿನಿಮಾ , ಕಾಮತ್ ಮಸಾಲೆ ದೋಸೆ ಎಲ್ಲಾ ಮುಗಿತಿತ್ತು
ಈಗ ಒಂದು ತಿಂಗಳ ಸಂಬಳನಾ ಶಾಪಿಂಗ ಮಾಲ್ ಗಳು ಒಂದೇ ಒಂದು ಸಂಜೆಗೆ ಹೀರಿ ಬಿಡುತ್ತವೆ!!


ಮನದಂಗಳದಲಿ ಮಳೆಹನಿ....................


ಸುರಿಯುವ ಸೋನೆಯಲಿ ನೆನೆದೆ ನಿನ್ನಂದ

ಹೇಳಲಿ ನ ಹೇಗೆ ನನ್ನ ಮನದಳದ ಮಾತಿಂದ

ಆದರು ಕೇಳು ಒಲವೆ ನಿನ್ನ ನೆನಪಿನಿಂದ ಆದ್ ಬೆರಗೊಂದ


ಆ ಸೋನೆಯಲಿ ಜೊತೆಯಾದೆ ನೀ

ಆ ಸಂಜೆ ಸುರಿದ ಮಳೆಗೆ ಸ್ವಾತಿಯ ಮುತ್ತಾದೆ ನೀ

ಆರ್ಭಟಿಸಿದ ಸಿಡಿಲಿಗೆ ಹರಿಣಿಯಾದೆ ನೀ

ಕಣ್ಣಕೊರೈಸುವ ಮಿಂಚಿಗೆ ನನ್ನೆದೆಗೂಡಿನ ಗುಬ್ಬಚ್ಚಿಯಾದೆ ನೀ


ಅಂದು ನೀ ನುಡಿದೆದ್ದೆ ನೀ ನನ್ನವಳೆಂದು

ನಾ ನಿನ್ನವನೆಂದು

ಲೋಕದ ಹಂಗಿನ್ಯಾಕೆಂದು

ಅಂದು ಸುರಿದ ಸೋನೆಗೆ ಶಪಿಸುವೆ ನಾನಿಂದು

ಹೇಳು ಇಂದು ಬಂದ ಸೋನೆಗೆ ಹೇಗೆ ಹೇಳಲಿ ನಿನೆಲ್ಲೆಂದು


ನಾನಿನ್ನು ಹುಡುಕುತಲಿರುವೆ

ನೀ ಮಳೆಯಲಿ ನಡೆದು ಬಂದ ಹೆಜ್ಜೆಯ ಗುರುತ

ಕೈ ಬಳೆಯ ನಾದವ

ನೀ ಮುಡಿದ ಮಲ್ಲಿಗೆಯ ಘಮ ಘಮವ

ಮತ್ತೊಮ್ಮೆ ಬರಲಾರೆಯಾ ಒಲವೆ ನನ್ನ

ಮನದಂಗಳಕೆ ಸೋನೆ ನಂತರದ ತಂಗಾಳಿಯ ಹಾಗೆ


ಸುರಿಯುವ ಸೋನೆಯಲಿ ನೆನೆದೆ ನಿನ್ನಂದ
ಹೇಳಲಿ ನ ಹೇಗೆ ನನ್ನ ಮನದಳದ ಮಾತಿಂದ
ಆದರು ಕೇಳು ಒಲವೆ ನಿನ್ನ ನೆನಪಿನಿಂದ ಆದ್ ಬೆರಗೊಂದ


ಮಹೆಶ ಎಸ್ ಎಲ್

Wednesday, July 11, 2007

ಪ್ರಕಾಶ ಶೆಟ್ಟರ ಕುಂಚದಲ್ಲಿ ನಾ

ಮೊನ್ನೆ ಭಾನುವಾರ ಪೋರಂ ಎಂಬ ಮಾಯಾಲೋಕಕ್ಕೆ( ಜೇಬು ಕತ್ತರಿಸುವ) ಹೋದಾಗ ನಮ್ಮ ಚಿತ್ರಕಾರ ಪ್ರಕಾಶ ಶೆಟ್ಟಿಯವರ ಕುಂಚದಲ್ಲಿ ನಾ ಕಂಡದ್ದು, ಬಿಡುವಿಲ್ಲದ ಬೆಂಗಳೂರು ಅದರ ಜೊತೆ ಹ್ಯಾಂವಕ್ಕೆ ಬಿದ್ದಿರೊ ನಾವು, ಇವುಗಳ ನಡುವೆ ಸಿಗುವ ಇಂತಹ ಎಷ್ಟೊ ಸಣ್ಣ ಸಣ್ಣ ಕ್ಷಣಗಳನ್ನ ಹಾಗೆ ಕಳೆದುಕೊಂಡು ಬಿಡುತ್ತೆವೆ , ಅಂತಹ ಒಂದು ಸಂತೋಷದ ಕ್ಷಣ ನನ್ನದಾಗಿಸಿದ ಮಿತ್ರ ರಫೀಕನಿಗೆ ಮತ್ತು ಚಿತ್ರಕಾರ ಪ್ರಕಾಶ ಶೆಟ್ಟರಿಗೆ ನನ್ನ ದನ್ಯವಾದಗಳು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನಿನ್ನ ನಿರ್ಭಂದನೆಗಳ
ನನ್ನ ಕಳವಳಗಳ ನಡುವೆ
ನನ್ನ ಹಣೆಬರಹವೆ ನನಗೆ ಶತ್ರುವಾಯಿತೆ
ನಾನಾದರೂ ಎನೆಂದು ಹೇಳಲಿ ನನ್ನೊಲವೆ
ನನ್ನ ಮನದಿಂದ ನೀ ದೂರಾದ ಮೇಲೆ,
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನನ್ನಸೆಗಳೆಲ್ಲಾ ಮಣ್ಣಾಗಿ
ಕನಸುಗಳೆಲ್ಲಾ ಚೂರಾಗಿ
ಬದುಕಿರುವೆ ನಿನ್ನಿಂದ ದೂರಾಗಿ
ಸಾಯಲು ಸಾದ್ಯವಿಲ್ಲಾ ನಿನ್ನ ನೆನಪಿನಿಂದಾಗಿ
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,




ಮಹೇಶ ಎಸ್ ಎಲ್

ಹಂಗಾರ ನೀ ಹೋಗ್

ಈ ಮಾತನ್ನ ಅವನು ಯಾವುದೆ ಉದ್ವೇಗವಿಲ್ಲದೆ ಹುಟ್ಟಿದ ಆ ಇಪ್ಪತೈದು ವಸಂತಗಳಲ್ಲಿ ಆ ರೀತಿ ಸಮಾಧಾನವಾಗಿ ಹೇಳಿದ್ದ ಹಂಗಾರ್ ನೀ ಹೋಗ್
ಅವನಿಗೆ ತನ್ನ ಈಗಿನ ಪರಿಸ್ಥಿತಿಗಿಂತ ಅದನ್ನ ತಂದೊಡ್ಡಿದ ದರಿದ್ರ ಜಾತಿ ಪ್ರಪಂಚದೆಡೆಗೆ ಒಂದು ಸಿಟ್ಟು ಅನ್ನೊದಕ್ಕಿಂತ ದಿವ್ಯ ನಿರ್ಲಕ್ಶತನ ಬಂದು ಬಿಟ್ಟಿತ್ತು
ಅವನ ಆಗಿನ ಸ್ಥಿತಿಗೆ ಒಂದು ರೀತಿ ಅವನೆ ಕಾರಣ ಅವನೂ ಸಹ ಜಗತ್ತಿನ ಸಮಸ್ತ ಜೀವಿಗಳಂತೆ ಪ್ರೀತಿಯ ಬೆಂಬತ್ತಿದ್ದ ಅವಳು ಸಹ ಅದನ್ನೆ ಮಾಡಿದ್ಲು ಅದು ಐದು ಸಂವತ್ಸರ ಗಳಿಂದ ನಿರಂತರ ಸಾಗಿದ ಒಲವಿನ ಪಯಣ,,,,
ಅದರಲ್ಲಿ ಸ್ವಲ್ಪ ಸಿಟ್ಟು, ಚೂರು ಬಿಗುಮಾನ ಮುಂದೆ ಬರುವ ಎಲ್ಲಾ ಜನ್ಮಕ್ಕೂ ಕೊಟ್ಟರೂ ಮುಗಿಯಲಾರದ ಒಲವು, ಎಲ್ಲಾ ಇತ್ತು ಆದರೂ ಜಾತಿ ಸುಳಿಗೆ ಸಿಕ್ಕ ಪ್ರೀತಿಯ ದೋಣಿ ಐದೇ ಸಂವತ್ಸರಕ್ಕೆ ಮುಳುಗಿ ಹೋಗಿತ್ತು.

ಕುವೆಂಪು ಹೇಳಿದ್ರು __
ಜಾತಿ ಸುಡೊ ಮಂತ್ರ ಕಿಡಿ
ಪ್ರೀತಿ ಅಂತ
ಆದ್ರೆ ನಮ್ಮ ಜಾತಿಯ ಭೂತಗಳು ಅದನ್ನ ಮಾಡಿದ್ದು
ಪ್ರೀತಿ ಸುಡೊ ಮಂತ್ರ ಕಿಡಿ
ಜಾತಿ ಅಂತ

ಕಟ್ಟಿಕೊಂಡ ಕನಸುಗಳು , ಒಬ್ಬ್ಬರಿಗೊಬ್ಬರು ಕೊಟ್ಟುಕೊಂಡ ಆಶ್ವಾಸನೆಗಳು, ಬರೆದುಕೊಂಡ ಪ್ರೀತಿಯ ಪತ್ರಗಳು , ಒಲವಿನ ಹಾಡು ತಿರುಗಾಡಿದ ಬೀದಿಗಳು , ಒಟ್ಟಿಗೆ ಕುಳಿತು ಮೊದಲು ಹುಟ್ಟುವ ಹೆಣ್ಣು ಮಗುವಿಗೆ ಇಡಬೇಕಾದ ಹೆಸರು.ಇದೆಲ್ಲವನ್ನು ಒಂದೆ ಉಸಿರಲ್ಲಿ ಕೊಚ್ಚಿ ಹಾಕಿದ್ದು ಜಾತಿ ಎಂಬ ಪಾಪಾತ್ಮ!!!!!!!

ಹುಡುಗಾ ಪ್ರೀತ್ಸ್ ತಿಯಾ ಅಂತ ಕೇಳ್ದಾ
ಹುಡುಗಿ ಹೇಳ್ತು ಹೂಂ ಜಾತಿನಾ!!

ಅದಕ್ಕೆ ಹುಡುಗಾ ಹೇಳಿದ್ದು ಹಂಗಾರ್ ನೀ ಹೋಗ್
ಅಂತ
ಗೆಳೆಯರೆ ಕೊನೆಯ ಒಂದು ಮಾತು
ಯಾವ ಕಾಲದಲ್ಲಿ ಇದಾರೆ ಇನ್ನು ಇವರು ಜಾತಿ ಬಗ್ಗೆ ಮಾತಾಡ್ತಾರೆ ಇವರ ಪೂಜೆಯ ವಿಧಾನ ವನ್ನ ಇವರದೆ ಮನೆಯಿಂದ ಹೋರಗೆ ಹೋಗುವ ಇವರ ಕಂದ ಬಾರಲ್ಲಿ ಅದರ ಅರ್ಥ ಹೆಳ್ತಾ ಕೂತಿರುತ್ತೆ
ಜಾತಿ ಜಿಂದಾಬಾದ್