![](https://blogger.googleusercontent.com/img/b/R29vZ2xl/AVvXsEjMgy5ezt9NIFAUy7GRgmE9EwhYshyphenhyphenUNU5iNL_UMlsBqBofxnUONCkoG0UK0U_KQN1k51CoSM30CmP9kx5c1OifsT1dSFfHymjgnnDeN8rqwBVcmkpXdHdMG1Kod_sJL1_vaxjTa_7Uhpc/s320/readingRoom.jpg)
ನಿನ್ನೆ ಜೋಗಿಯವರ ಹೊಸ ಪುಸ್ತಕ <ಜೋಗಿಯ ಕಥೆಗಳು> ಓದುತ್ತಿರುವಂತೆ ಅನ್ನಿಸಿದ್ದು ಅಕ್ಷರಗಳಲ್ಲಿ,
ಸುಬ್ಬಣ್ಣ-;ಹತಾಶೆ ಅಹಂಕಾರ ಅವ್ಯಕ್ತ ಭಯ ಹೊಟ್ಟೆಕಿಚ್ಚು ನಮ್ಮೆಲ್ಲರಲ್ಲೂ ಇವೆ ಅದನ್ನ ಜೋಗಿಯವರು ಸುಬ್ಬಣ್ಣನ ಮೂಲಕ?
ಇಲ್ಲಿ ಭೀಮಸೇನಜೋಶಿಯವರು ಒಮ್ಮೆ ಅಭಿಮಾನವಾದರೆ ಮತ್ತೊಮ್ಮೆ ಹೊಟ್ಟೆಕಿಚ್ಚಿನ ಹರದಾರಿಯಾಗುತ್ತಾರೆ ಸುಬ್ಬಣ್ಣಹುಚ್ಚುಖೋಡಿಮನಸುಗಳಿಗೆ ಹಿಡಿದ ಕೈಗನ್ನಡಿಯಾ?
ಗೋವಿಂದ ವಿಠಲ ಹರಿ ಹರಿ-; ದೇವರು ನಂಬಿಕೆ ಮನುಷ್ಯ ಮತ್ತು ಪ್ರೀತಿ , ಜೋಗಿಯವರು ಇಲ್ಲಿ ಇದನ್ನು ಅದ್ಭುತವಾಗಿ ಸಮ್ಮಿಲನಗೊಳಿಸಿದ್ದಾರೆ ನನಗನ್ನಿಸಿದ್ದು ಇಲ್ಲಿ ಮನುಷ್ಯ ದೇವರನ್ನು ಒಂದು ಕೆಲಸದಲ್ಲಿ ಕಂಡುಕೊಳ್ಳುವ ಪ್ರಯತ್ನವಾ .
ದೇವರು ಪ್ರೀತಿ ಇಲ್ಲವೆಂದ ಜೋಶಿಯವರು ಕರ್ತವ್ಯದ ನೆಪದಲ್ಲಿ ಎರಡನ್ನು ಒಂದೇ ಗುಕ್ಕಿನಲ್ಲಿ ಒಪ್ಪಿಕೊಳ್ಳುತ್ತಾರೆ ಜೋಗಿಯವರಿಗೆ ಸಲಾಂ
ವಿಶ್ವಸುಂದರಿ-; ಮನಸಿನ ಭಾವನೆಗಳೊಂದಿಗೆ ಜೋಗಿ ಸರ್ ಲೀಖನಿ ಅದ್ಭುತವಾಗಿ ಮಾತನಾಡಿದೆ.
ಇನ್ನೊಬ್ಬ-; ಊಹೂಂ ಇದು ನನ್ನ ಯೋಚನಾಲಹರಿಗೆ ನಿಲುಕದ್ದು, ಸಂಬಂಧಗಳ ಗಾಢತೆಯಾ? ಸ್ನೇಹಲೋಕದ ನಿಗೂಢತೆಯಾ?
ತನ್ನನ್ನೆ ತಾನು ಕಂಡುಕೊಳ್ಳುವ ವಿಚಿತ್ರ ಯತ್ನವಾ ಜೋಗಿ ಸರ್ ದಯವಿಟ್ಟು ಪರಿಹರಿಸಿ.
ಕನ್ನಡಿಯೊಳಗೆ ಗಳಗನಾಥರಿಲ್ಲ-; ಹಾಗಿದ್ದರೆ(ನನಗಷ್ಟೆ ಬದುಕಿದ್ದು ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೆನಾ) ಗಮನವಿಟ್ಟು ಓದದಿದ್ದರೆ ಎಂದಿಗೂ ಅರ್ಥವಾಗದ ಮಾತು ಅನ್ನಿಸುತ್ತೆ, ಮನುಷ್ಯನ ಸ್ವಾರ್ಥಕ್ಕೆ ಕೊಡಬಹುದಾದ ಅತ್ಯುತ್ತಮ ಉದಾಹರಣೆ
ಭ್ರಮಾಲೋಕದಲ್ಲಿ ವಿಹರಿಸುವಾಗಲೆ ವಾಸ್ತವತೆಯೆಡೆಗೆ ಬದುಕು ಒದ್ದೊಡಿಸುವುದು ಅಂದ್ರೆ ಇದೇನಾ...... ನಮ್ಮ ಕಿಂದರಿಜೋಗಿಯ ಜೋಳಿಗೆಯಲ್ಲಿ ಇನ್ನು ಎನೇನು ಅಡಗಿದೆಯೊ