Sunday, March 30, 2008

ಒಂದಷ್ಟು ಸಂತೋಷದ ವಿಷಯಗಳು




ತುಂಬ ದಿನಗಳಿಂದ ಎನನ್ನೂ ಬರೆದಿಲ್ಲ ಅದು ನನ್ನ ಸೊಮಾರಿತನ.
. ಸಂತೋಷದ ವಿಷಯವೆಂದರೆ ಗೆಳಯ ಎಮ್ ಡಿ ಅತಿ ರಭಸವಾಗಿ ಮುನ್ನುಗ್ಗುತ್ತಿದ್ದಾನೆ. ಮೊನ್ನೆ ಮೊನ್ನೆ ಅವನ ಬಾಂಬೇ ಟೇಲರ್ - ಲೇಡೀಸ್ ಬ್ಲೌಸ್ (!) ಸ್ಪೇಶಾಲಿಸ್ಟ ದಟ್ಸ್ ಕನ್ನಡ ಅಂರ್ತಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು
ತುಂಬ ಸುಂದರವಾದ ಕಥೆ ಅದು ಒಮ್ಮೆ ಓದಿ ನೋಡಿ ಒಂದು ಒಳ್ಳೆಯ ಓದಿಗೆ ಖಂಡಿತ ಮೋಸವಿಲ್ಲ. ಮತ್ತೊಂದು ಕಡೆ ಗೆಳೆಯ ಸಂತೋಷರ ಅಮೃತ ಸಿಂಚನ ನಿಜಕ್ಕೂ ಅದ್ಭುತವಾಗಿ ಸಾಗಿದೆ. ಅವರ ಹೋಳಿಯ ಮೆಲುಕು... ಬರಹದಲ್ಲಿ ಉತ್ತರ ಕರ್ನಾಟಕದ ಸಮಸ್ತ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ ಉತ್ತರಕರ್ನಾಟಕ ಅಂದಿದ್ದಕ್ಕೆ ಕ್ಷಮೆ ಇರಲಿ ಉತ್ತರ ಕರ್ನಾಟಕ, ಉತ್ತರಕನ್ನಡ, ದಕ್ಷಿಣಕನ್ನಡ ಇವೆಲ್ಲಾ ನಾವು ಮಾಡಿಕೊಂಡಿರುವ ಮುಚ್ಚಲಾರದಂತಹ ಕಂದರಗಳು ಎಂದಾದರು ಮುಚ್ಚುತಾವೆಯೆ?? ಮತ್ತೊಂದೆಡೆ ಚುನಾವಣೆಯ ಭರಾಟೆ ಜೋರಾಗಿ ಶುರುವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ನಮ್ಮನ್ನು ಮತ್ತು ನಮ್ಮೆಲ್ಲರನ್ನೂ ಸಾಕುತ್ತಿರುವ ಈ ಬೆಂಗಳೂರಿನ ರಸ್ತೆ ಬದಿಯ ಗೋಡೆಗಳನ್ನು ಆ ಕೆಂಪೆಗೌಡರೆ ಕಾಪಾಡಬೇಕು. ಇನ್ನೂ ಪತ್ರಿಕೆಗಳ ವಿಷಯಬಿಡಿ ಅದರ ಬಗ್ಗೆ ಹೇಳುವದಾದರೆ ಮತ್ತೊಂದು ಬ್ಲಾಗನ್ನೆ ಹುಟ್ಟುಹಾಕಬೇಕು. ಚುನಾವಣೆ ಇಲ್ಲದ ದಿನಗಳಲ್ಲೆ ಸಹಿಸಿಕೊಳ್ಳುವುದು ಕಷ್ಟಸಾಧ್ಯ ಇನ್ನೂ ಚುನಾವಣೆ ಪ್ರಕಟವಾದರೆ ಮುಗಿಯಿತು. ಇದಕ್ಕೆ ಪೂರಕವೆಂಬಂತೆ ರವಿ ಬೆಳಗೆರೆಯವರು ಕಳೆದ ಸಾರಿಯ ತಮ್ಮ ಸಂಪಾದಕಿಯದಲ್ಲಿ ಸರಿಯಾಗಿಯೆ ಬರೆದಿದ್ದಾರೆ. ಪತ್ರಿಕೆಯ ಜಾಹೀರಾತು ಮತ್ತು ಗೋಡೆ ಬದಿಯ ವಿನೈಲ್ ಭೂತಗಳಿಂದ ನಮಗೆ ಮುಕ್ತಿ ಎಂದೊ . ಕಡೆಯದಾಗಿ ಇನ್ನೊಂದು ಮಾತು ಯೋಗರಾಜ ಭಟ್ರು ಮತ್ತೊಂದು ಹಾಡನ್ನ ಅರಮನೆ ಚಿತ್ರಕ್ಕಾಗಿ ಬರೆದಿದ್ದಾರೆ "ನನ್ನ ಎದೆಯಲಿ ಇಟ್ಟ ನಾಕು ಹೆಜ್ಜೆಯ ಗುರುತು ಅಳಿಸಿ ಬಿಡು" ಸುಂದರವಾದ ಸಾಹಿತ್ಯವಿರುವಂತಹ ಹಾಡು. ಅದರ ಬಗ್ಗೆ ಮತ್ತೊಮ್ಮೆ ಸವಿಸ್ತಾರವಗಿ ಬರೆಯುತ್ತೆನೆ ಎಮ್ ಡಿ ಯದೆ ಇನ್ನೊಂದು ರಾಪ್ಚಿಕ್ ಪದ್ಯ ಕಣ್ಣು-ನೋಟ ಓದುವುದನ್ನ ಮರೆಯಬೇಡಿ ಧನ್ಯವಾದಗಳೊಂದಿಗೆ ನಿಮ್ಮ

Sunday, March 2, 2008

ಬೆಂದ ಮನಸ್ಸುಗಳಿಗೆ ಸಾಂತ್ವನದ ಕೈ ಇಂತಿ ನಿನ ಪ್ರೀತಿಯ


ಯಾರೊ ಯಾರೊ ಯಾರೊ
ಒಲಿದೊರು ಯಾರೊ
ನಿನ್ನ ತೊರೆದೊರು ಯಾರೊ
ಜೊತೆಗುಳಿದೊರೊ ಯಾರೊ
ಕಡೆಗುಳಿಯೊರು ಯಾರೊ.
ಅವಳು ಕಾರಣ ಹೇಳದೆ ಹೊರಟು ಹೋಗುತ್ತಾಳೆ. ಇವನು ಕುಡಿತದಲ್ಲಿ ಕಾರನ ಹುಡುಕುವ ಪ್ರಯತ್ನ ಪಡುತ್ತಾನೆ. ಕಾರಣ ಮಾತ್ರ ಸಿಗುವುದೆ ಇಲ್ಲ ತಿರುಗಿ ನೋಡಿದರೆ ಜೀವನದ ಆರು ತುಂಬು ವರ್ಷಗಳು ಕೇವಲ ಖಾಲಿ ಕಾಗದ.
ಪ್ರೀತಿಯ ಮಳೆಯಲ್ಲಿ ಬೆಂಕಿಯ ಕೊಡೆಕೊಟ್ಟು ನಿಲ್ಲಿಸದವರಾರೊ
ಪ್ರೀತಿಯ ಹೊಳೆಯಲ್ಲಿ ಇಜಲು ಬರದವನ ಬಿಳಿಸಿದವರಾರೊ ಮುಳುಗಿಸಿದವರಾರೊ.

ಸೂರಿಯವರಲ್ಲದೆ ಬೇರೆ ಯಾರು ಮಾಡಿದ್ದರು ಈ ಸಿನಿಮಾ ಇಷ್ಟೊಂದು ಮನ ಮುಟ್ಟುತ್ತಿರಲಿಲ್ಲ.ಆದರೆ ಬೇರೆಯವರಿಗೆ ಈ ತರಹದ ವಿಷಯಗಳು ಸಿಗಬೇಕಲ್ಲ. ಚಿತ್ರದ ಶುರುವಿನಲ್ಲಿ ನಾಯಿ ಸೀನಪ್ಪನ ಗಾಡಿಯಲ್ಲಿ ಒಂದು ಅನಾಥ ಮಗುವಿನ ಶವದ ಜೊತೆ ಕಿಟ್ಟಿಯ ಸಂಭಷಣೆ ಹೀಗಿದೆ " ಪುಟ್ಟಿ ನಾನು ನೀನು ಫ್ರೆಂಡ್ ಆಗೋಣ ಇದು ನಿನ್ನ ಗಿಫ್ಟು ನಿನಗೆ ಒಂದು ಹೆಸರು ನೀಲಿ ಹೂ " ಬದುಕಿನ ಪ್ರತಿಯೊಂದು ಮಗ್ಗಲು ಗಳನ್ನ ಸೂರಿ ತಮ್ಮ ಕುಂಚದಿಂದ ಹ್ಯಾಗೆ ಬಿಡಿಸಿಡುತ್ತಾರೆ ಅಂದ್ರೆ ಅದು ನೋಡಿಯೆ ಅನುಭವಿಸಬೇಕು. ಇಲ್ಲಿ ಕೇವಲ ಪ್ರೀತಿಯಿಲ್ಲ ಅದರವೆಗಿನ ನಗ್ನ ಬದುಕಿದೆ ಅದರೊಳಗಿನ ತಿಕ್ಕಲುತನಗಳಿವೆ ನಮ್ಮೆಲ್ಲರಲ್ಲು ಇರುವಂತಹವೆ.
ನಗುವನು ತುಟಿಗಿಟ್ಟೊರು ಯಾರೊ
ಕನಸುಗಳನು ಸುಟ್ಟೊರು ಯಾರೊ
ಪ್ರೀತಿಯ ಬಲಿ ಕೊಟ್ಟೊರು ಯಾರೊ
ಉತ್ತರಿಸೊರು ಯಾರೊ.

ಉತ್ತರ ಯಾರಲ್ಲಿದೆ ಕಾರಣ ಹೇಳದೆ ಹೊರಟು ಹೋದವಳಲ್ಲು ಇಲ್ಲ ಉಳಿದುಹೋದವನಲ್ಲು ಇರುವುದಿಲ್ಲ. ಇದು ಬರಿ ಸಿನಿಮಾ ಅಂತ ಅನ್ನಿಸೊದೆ ಇಲ್ಲ ಒಂದು ಸಾಮಾನ್ಯನ ಬದುಕಿದ ಅವನ ಮುರಿದುಹೋದ ಕನಸಿನ ತುಣುಕಿದೆ . ಕೈಹಿಡಿಯುವ ಕುಡಿತ
ಎಲ್ಲಿಗೆ ತಂದು ನಿಲ್ಲಿಸುತ್ತೆ ಅನ್ನೊ ಸತ್ಯವಿದೆ .
ನನ್ನ ಅವಳಒಲವಿಗೆ
ಕೊನೆಯೆ ಇರದ ಕಡಲಿಗೆ
ಸಾವೇ ಬರದ ನೆನಪಿಗೆ
ಅಂತ್ಯವು ಎಲ್ಲಿದೆ

.ಪ್ರತಿಯೊಬ್ಬರ ಬದುಕಿನ ಯಾವುದೊ ಒಂದು ಹಂತದಲ್ಲಿ ಪ್ರೀತಿ ಅನ್ನೊ ಎರಡುವರೆ ಅಕ್ಷರ ಹಾದು ಹೋಗಿರುತ್ತೆ ಆದರೆ ಅದಕ್ಕೆ ಸಾವು ದೇವ್ರಾಣೆಗು ಬರಲ್ಲ ಅದು ಹೋಗೊದು ಎನಿದ್ರು ನಮ್ಮೊಂದಿಗೆನೆ. ಇದನ್ನ ಸೂರಿ ಅದ್ಭುತವಾಗಿ ಪರದೆಗಿಳಿಸಿದ್ದಾರೆ ಕಿಟ್ಟಿ ಕೂಡ ಅಷ್ಟೇ ಅದ್ಭುತವಾಗಿಸಿನಿಮಾ ಪೂರಾ ಆವರಿಸಿದ್ದಾರೆ ಕಿಟ್ಟಿ ಅಭಿನಯ ಆ ಕಂಠ ಸಿನಿಮಾ ನೋಡಿ ಅಚೆ ಬಂದರು ಮತ್ತೆ ಮತ್ತೆ ಕಡುತ್ತೆ. ಕಳೆದು ಹೋದ ಯಾರೊ ತಟ್ಟನೆ ನೆನಪಿನಂಗಳಕೆ ಲಗ್ಗೆ ಹಾಕುತ್ತಾರೆ. ಅದು ಸೂರಿ ನಮ್ಮನ್ನು ಆವರಿಸುವ ರೀತಿ. ಈ ಕೆಲಸ ಬೇರೆ ಯಾರಿಂದಲು ಸಾಧ್ಯವಿಲ್ಲ. ಸರಳವಗಿ ಹೇಳುವುದಾದರೆ " ಇದು ಬೆಂದ ಮನಸ್ಸುಗಳಿಗೆ ಒಂದು ಸಾಂತ್ವನದ
ಕೈಗನ್ನಡಿ, ಪ್ರೀತಿಯ ಮತ್ತೊಂದು ಮಗ್ಗಲು
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ