Sunday, January 20, 2008

ನದಿಯ ನೆನಪಿನ ಹಂಗು


ನದಿಗೆ ನೆನಪಿನ ಹಂಗು ಕಾದಂಬರಿಯಾ, ಕಥೆಯಾ, ಅಥವಾ ನಮ್ಮಂತೆ ನಮ್ಮೊಳಗಿನೊಬ್ಬನ ಆತ್ಮಕಥೆಯಾ . ಇಲ್ಲಾ ಅದು ಇಂತಹದೆ ಎಂದು ಮಾತಿನಲ್ಲಿ ಹೇಳುವುದಕ್ಕೆ ಸಾದ್ಯವಿಲ್ಲ ಅನ್ನ್ಸುತ್ತೆ. ಪರಿಸರ ಅದನ್ನು ಉಳಿಸುವುದಕ್ಕೆ ಹೋರಾಡುವ ಹೋರಾಡುತ್ತಲೇ ಜ್ಞಾನೋದಯವಾದವನ ಹಾಗೆ ಮಾತನಾಡುತ್ತ ತನ್ನನ್ನು ತಾನೆ ಪ್ರಶ್ನಿಸಿಕೊಳ್ಳವ ಪತ್ರಕರ್ತ ಆನಂದ ನಮ್ಮೆಲ್ಲರಲ್ಲೂ ಇರಬಹುದಾ ಅಂತ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ. ಕಾದಂಬರಿ ಓದುತ್ತಾ ಸಾಗಿದ ಹಾಗೆ ಸೋಮಯಾಜಿಗಳು ಅವರ ಮಗ ಆನಂದ ಆನಂದನ ಪ್ರೇಯಸಿ ಸುಗಂಧಿ...... ಈ ಮೂರು ಪಾತ್ರಗಳು ಅದೆಷ್ಟು ಕಾಡುತ್ತವೆ . ಸುಗಂಧಿ ಆನಂದರ ಸಂಬಂಧವನ್ನು ಮುಗಿಸಲು ಸೋಮಯಾಜಿಗಳು ಕೊಡುವ ಕಾರಣಗಳು ಹೂಡುವ ತಂತ್ರಗಳು, ಸುಗಂಧಿ ಆತ್ಮಹತ್ಯ ಮಾಡಿಕೋಂಡ ನಂತರ ತಮ್ಮನ್ನು ತಾವೆ ಸಂತೈಸಿಕೊಳ್ಳುವ ರೀತಿ ಅಸಹಾಯಕ ತಂದೆಯ ಹತಾಶ್ ಪ್ರಯತ್ನಗಳಂತೆ ಕಾಣುತ್ತವೆ. ಕಾದಂಬರಿಯ ಮೊದಲಿಗೆ ಬರುವ ಸದಾನಂದ ರೈ ಮಗಳು ವಿಣಾಸರಸ್ವತಿ ಅವಳ ಗಂಡ ನಾಗೇಶ್ ಮಯ್ಯ ನಿರಂಜನನ್ನು ಕೊಲ್ಲಿಸಿದ್ದಾರೆ ಎನ್ನುವ ಗಾಂಪರ ಗುಂಪು ಅದಕ್ಕಾಗಿ ಒಂದು ಹೋರಾಟವೆಂಬ ಹಾರಾಟ ಎಲ್ಲಾ ವಿಚಿತ್ರವಾಗಿ ಕಾಣುತ್ತವೆ. ನಾನಿಲ್ಲಿ ಕಾದಂಬರಿಯ ವಿಶ್ಲೆಷಣೆ ಮಾಡುತ್ತಿಲ್ಲ ಆ ತರಹದ ಘಟನೆಗಳು ನಿಜ ಜೀವನದಲ್ಲಿ ನಡೆಯುತ್ತಲೆ ಇರುತ್ತವೆ ಜೋಗಿಯವರು ಅದನ್ನೆ ಹೇಳುತ್ತಾರೆ ಆದರೆ ಕೇಳೊರು ಯಾರು? ರವಿ ಬೆಳಗೆರೆಯವರು ತಮ್ಮ ಒಂದು ಬರಹದಲ್ಲಿ ಕಾದಂಬರಿಕಾರನಾಗುವವನಿಗೆ ಏನು ಬರದಿದ್ದರು ಸ್ವಲ್ಪ ಸುಳ್ಳು ಹೇಳುವುದಕ್ಕೆ ಬರಬೇಕು ಎಂಬರ್ಥದಲ್ಲಿ ಬರೆಯುತ್ತಾರೆ ಇಲ್ಲಿ ಜೋಗಿಯಯರು ಆ ಮಾತನ್ನು ಸುಳ್ಳು ಮಾಡಿದ್ದಾರೆ. ಇದು ಅವರ ಕನಸೊ ಕಲ್ಪನೆಯೊ ಅಥವಾ ನಾನು ಅದನ್ನು ಹೀಗೆ ಅರ್ಥೈಸಿಕೊಳ್ಳುತ್ತಿದೆನಾ? ಗೊತ್ತಿಲ್ಲ ಅವರು ಪರಿಸರ ಉಳಿಸಿ ಅಂತ ಆನಂದ ಮೂಲಕ ಹೇಳುತ್ತಾರೆ. ನಾವು ಧರ್ಮ ಜಾತಿಗಳನ್ನು ಬಿಟ್ಟು ಬರಲಾರದಷ್ಟು ದೂರ ಸಾಗಿದ್ದೆವೆ ಎಂದು ಗೋಪಾಲಕೃಷ್ಣ ತೋಳ್ಪಡಿತ್ತಾಯರ ಮುಖಾಂತರ ಹೇಲಲು ಪ್ರಯತ್ನಿಸುತ್ತಾ ಸಾಗುತ್ತಾರೆ. ಇನ್ನೂ ಸ್ವಾಮಿಗಳು ಅವರ ಕರ್ಮಕಾಂಡಗಳನ್ನ ಮತ್ತು ಅವರು ಮನುಷ್ಯರೇ ಎಂಬುದನ್ನ ವಿದ್ಯಾನಂದರ ಮುಖೆನ ಹೇಳುವ ಪ್ರಯತ್ನ ಪಟ್ಟಿದ್ದಾರೆ. ರಘುನಂದನ ನರ್ಮದೆ ಅವರ ನಡುವಿನ ಪ್ರೇಮಕಹಾನಿ. ನರ್ಮದೆ ತನ್ನ ತಂದೆ ಗೋಪಾಲಕೃಷ್ಣ ಸೋಮಯಾಜಿಯ ಸಾವಿನಿಂದ ತನ್ನ ಸ್ಥಿಮಿತ ಕಳೆದುಕೊಳ್ಳುವುದು . ರಘು ನರ್ಮದೆಯನ್ನು ಮದುವೆಯಾಗಿ ಎರಡುವರೆ ತಿಂಗಳಿಗೆ ಅವಳಿಗೆ ನಾಲ್ಕು ತಿಂಗಳು ಅಂತ ಗೊತ್ತಾದಾಗ ಆ ಮಗು ನನ್ನದಲ್ಲ ನರ್ಮದೆ ನನ್ನ ಜೊತೆ ನಾಟಕವಾಡುತ್ತಿದ್ದಾಳಾ ಹೀಗೆಲ್ಲ ಯೋಚನೆ ಮಾಡುತ್ತಾನೆ. ಆದರೆ ಓದುವು ಮನಸ್ಸಿಗೆ ಒಂದು ಹೊಲಸು ಅನ್ನಬಹುದಾದಂತಹ ಯೋಚನೆ ಬರುತ್ತದೆ. ಗೋಪಾಲಕೃಷ್ಣ ಸೋಮಯಾಜಿ ಮಗಳನ್ನು ಮೋಹಿಸಿ ಆತ್ಮಹತ್ಯ ಮಾಡಿಕೊಂಡನೆ? ಅದರಿಂದಾಗಿಯೆ ನರ್ಮದೆ ತನ್ನ ಸ್ಥಿಮಿತ ಕಳೆದುಕೊಂಡಳೆ? ಈ ಥರ ನನಗೆ ಗೊತ್ತು ಇದು ತೀರ ಕೀಳುಮಟ್ಟದ ಯೊಚನೆ ಎಂದು ಆದರೂ ತಳ್ಳಿ ಹಾಕುವಂತಿಲ್ಲವಲ್ಲ. ಒಟ್ನಲ್ಲಿ ಕಾದಂಬರಿ ಕಾಡುತ್ತದೆ, ಮನಸ್ಸಿನಲ್ಲಿ ನದಿಯಂತೆ ಭೋರ್ಗರೆಯುತ್ತದೆ ವರ್ಷಕ್ಕೊ ಎರಡು ವರ್ಷಕ್ಕೊ ಒಮ್ಮೆ ಶ್ರಾವಣ ಮಾಸದ ಸೋಮವಾರದಂದು ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟು ನೇತ್ರಾವತಿಯಲ್ಲಿ ಮಿಂದು ಧನ್ಯರಾಗುವವರು, ಸಮಾಜ ಸುಧಾರಣೆಯೇ ನಮ್ಮ ಜನ್ಮಸಿದ್ದ ಹಕ್ಕು (ಹಾಗಂತ ಅಂದು ಕೊಂಡಿರುವ ಜನ)ಎಲ್ಲರೂ ಓದಬಹುದಾದಂತಹ ಕಾದಂಬರಿಯ ತರಹದಂತಹ ಬರಹ ನದಿಯ ನೆನಪಿನ ಹಂಗು . ಇಲ್ಲಿ ಪುಸ್ತಕದ ಬಗ್ಗೆ ನನಗನಿಸಿದ್ದನು ಗೀಚಿದ್ದೆನೆ . ಮತ್ತೊಬ್ಬರಿಗೆ ಬೇರೆ ರೀತಿ ಅರ್ಥವಾಗಬಾರದು ಅಂತ ನಿಯಮವೆನಿಲ್ಲ ಅಲ್ವಾ? ಪುಸ್ತಕ ಓದಿ ದಕ್ಷಿಣ ಕನ್ನಡದ ಯಾತ್ರೆ ಮಾಡಿ ಬಂದಂತಾಗುತ್ತೆ ಜೋಗಿಯವರಿಂದ ಇನ್ನಷ್ಟು ಇಂತಹ ಬರಹಗಳನ್ನು ನೀರಿಕ್ಷಿಸುತ್ತಾ

Monday, January 7, 2008

ಪ್ರೀತಿ ಮಾಡಬಾರದು


ರಾಜುವಿನ ಎಲ್ಲ ಪ್ರಯತ್ನಗಳು ವಿಪಲವಾಗಿದ್ದವು. ಅವನು ಅವಳಿಗಾಗಿ ತನ್ನ ಸ್ನೇಹಿತರ ವಲಯದಲ್ಲಿ ಬೇರೆಯದೆ ರೀತಿಯಲ್ಲಿ ಚರ್ಚೆಗೊಳಪಡುತ್ತಿದ್ದ.ಆ ವಿಷಯ ಅವನಿಗೂ ತಿಳಿದೆ ಇತ್ತು ಆದರೆ ಏನೂ ಮಾಡಲಾಗದ ಪರಿಸ್ಥಿತಿ. ವಿಷಯ ಅವನ ಆಫೀಸಿನಲ್ಲಿ ಘಟಿಸಿದ್ದಾಗಿತ್ತು. ಸತತವಾಗಿ ಎರಡು ವರ್ಷ ಜೊತೆಗಿದ್ದಿದ್ದರಿಂದಲೊ ಮತ್ತೊಂದಕ್ಕೊ ರಾಜುಗೆ ಅವಳ ಮೇಲೆ ಒಲವು ಮೂಡಿತ್ತು ಅದನ್ನು ಅವಳಿಗೆ ಮೊದಲ ಬಾರಿಗೆ ತಿಳಿಸಿದಾಗ ಸುಮ್ಮನೆ ನಕ್ಕು ಮುಂದೆ ಸಾಗಿದ್ದಳು. ಅಷ್ಟಕ್ಕೆ ಇವನು ಸುಮ್ಮನಾಗಿದ್ದರೆ ಚೆನ್ನಾಗಿತ್ತೆನು. ಆದರೆ ಇವನ ತಲೆಯಲ್ಲಿ ಪ್ರೀತಿಯ ಭೂತ ಸವಾರ, ಮತ್ತೊಮ್ಮೆ ಲಂಚ್ ಟೈಮಿನಲ್ಲಿ ಅದೇ ವಿಷಯವಾಗಿ ಅವಳೊಂದಿಗೆ ಮಾತನಾಡಿದಾಗ ಅವಳು ಎಲ್ಲರೆದುರು ಅವನನ್ನು ಹಿಗ್ಗಾಮುಗ್ಗಾ ಬೈದಾಡಿ, ಮತ್ತೊಮ್ಮೆ ಈ ವಿಷಯವಾಗಿ ಮಾತನಾಡಿದರೆ ನಾನು ಬೇರೆಯ ರೀತಿಯಲ್ಲಿ ಯೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದೆ ಕೊನೆ ಆಲಿಂದ ಸೀದಾ ಮನೆಗೆ ಬಂದವನು ಮೂರು ದಿನಗಳಿಂದ ಆಫೀಸಿಗೆ ಹೋಗಿರಲಿಲ್ಲ.
ಮೂರನೇಯ ದಿನ ಅವನಿಗೆ ಅದೆನೆನ್ನಿಸಿತೋ ಮನೆಯಿಂದ ಹೊರಬಿದ್ದವನೆ ನೇರ ಕೆ ಅರ್ ಮಾರುಕಟ್ಟೆಗೆ ಹೋಗಿ ಒಂದು ಉದ್ದನೇಯ ಹಗ್ಗ , ಅಲ್ಲಿಂದ ಮೆಜೆಸ್ಟಿಕ್ಕಿಗೆ ಹೋಗಿ ಸೀಡ್ಸ್ ಅಂಗಡಿಯಲ್ಲಿ ಹತ್ತಿಗೆ ಹೊಡೆಯಲಿಕ್ಕೆ ಎಂದು ಒಂದು ಲೀಟರನಷ್ಟು ಮೆಟಾಸಿಡ್ ಔಷಧಿ, ಮುಂದೆ ತಿಗಳರ ಪೇಟೆಗೆ ಹೋಗಿ ಒಂದು ಹರಿತವಾದ ಚೂರಿ, ಹೀಗೆ ಎಲ್ಲವನ್ನೂ ಖರೀದಿಸಿ ಅಲ್ಲಿಂದಲೇ ಅವಳ ಮೊಬೈಲಿಗೆ ಒಂದು ರೂಪಾಯಿ ನಾಣ್ಯದ ದೂರವಾಣಿಯಿಂದ ಕರೆ ಮಾಡಿದ ಅತ್ತಲಿಂದ "ದಿಲ್ ಮೆ ಮೇರೆ ಹೈ ದರ್ದೆ ಡಿಸ್ಕೊ" ಎಂಬ ಹಾಡು ಬರುತ್ತಿತ್ತು. ಹಾಡು ನಿಂತು ಒಮ್ಮೆಲ್ಲೆ ಅವಳು ಉಲಿದಳು ಹಲೋ, ಅಷ್ಟೇ ಫೋನ ತುಂಡರಿಸಿ ಇವನು ಬಸ್ಟಾಪಿನ ಕಡೆಗೆ ನಡೆದ.
ಮನೆಗೆ ಬಂದವನೇ ತನಗೆ ಅತೀ ಇಷ್ಟವಾದ ಖಾರ್ಖಾರವಾದ ಚಿತ್ರಾನ್ನ ಮಾಡಿಕೊಂಡು ಕಡೆಯ ಬಾರಿಗೆಂಬಂತೆ ಸಾಕೆನಿಸುವಷ್ಟು ತಿಂದು ಮುಂದಿನ ಕೆಲಸದತ್ತ ಗಮನ ಹರಿಸಿದ. ಅವನ ಮೊಬೈಲಂತು ಮುರು ದಿನದಿಂದ ಫೋನ ಮಾಡಿದವರಿಗೆಲ್ಲ ಸ್ವಿಚ್ ಆಫ್ ಎಂದು ಹೇಳುತ್ತಿತ್ತು ಅದರಿಂದ ಅದರ ಕಡೆಗೆ ಹೆಚ್ಚು ಗಮನ ಕೊಡದೆ ಮಾರ್ಕೆಟಿನಿಂದ ತಂದ ಹಗ್ಗವನ್ನು ಕೈಗೆ ತೆಗೆದುಕೊಂಡು ಪ್ಯಾನಿನ ಕಡೆಗೆ ನಡೆದ. ಮೊದಲು ಪ್ಯಾನಿಗೆ ಹಗ್ಗ ಕಟ್ಟಲು ಅನುಕೂಲವಾಗುವಂತೆ ಉದ್ದನೇಯ ಸ್ಟೂಲ ಮೇಲೆ ನಿಂತು ಪ್ಯಾನಿನ ಕುತ್ತಿಗಿಗೆ ಹಗ್ಗ ಬಿಗಿದ ನಂತರ ದೊಡ್ಡ ಸ್ಟೂಲನ್ನು ಪಕ್ಕಕ್ಕೆ ಇಟ್ಟು ಚಿಕ್ಕ ಸ್ಟೂಲನ್ನು ಪ್ಯಾನಿನ ಅಡಿಗೆ ಹಕಿ ಹಗ್ಗವನ್ನು ತನ್ನ ಕುತ್ತಿಗೆಯ ಸಮನಂತರಕ್ಕೆ ತಂದು ಹಗ್ಗಕ್ಕೆ ಕುಣಿಕೆ ಹಾಕಿ ಅದನ್ನು ತನ್ನ ಕೊರಳಿಗೆ ಹಾಕಿಕೊಂಡು ನೋಡಿದ ಸರಿಯಾಗಿತ್ತು ಆಮೇಲೆ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡು ಮಿಟಿದ ಗಟ್ಟಿಯಾಗಿತ್ತು ನಂತರ ಹಗ್ಗವನ್ನು ಕೈಯಲ್ಲಿ ಹಿಡಿಕೊಂಡೆ ಕಾಲಿನಿಂದ ಕೆಳಗೆ ಇದ್ದ ಸ್ಟೂಲಿಗೆ ಝಾಡಿಸಿದ ಅದು ಪಕ್ಕಕ್ಕೆ ವಾಲಿದಾಗ ತೃಪ್ತಿಯ ನಿಟ್ಟುಸಿರು ಬಿಟ್ಟು ಸ್ಟೂಲನ್ನು ಮತ್ತೆ ಮೊದಲಿನ ಜಾಗಕ್ಕೆ ಇಟ್ಟು ಕೊರಳಿಗೆ ಕುಣಿಕೆ ಬಿಗಿದುಕೊಂಡಾಗ ಬಿಗಿಯಾದ ಕುಣಿಕೆ ಗಂಟಳನಾಳಕ್ಕೆ ಒತ್ತಿದಂತಾಗಿ ಆ ಘನ ಕಾರ್ಯವನ್ನ ಅಲ್ಲಿಗೆ ನಿಲ್ಲಿಸಿದ.
ಎದುರಿಗೆ ಟಿ ವಿ ತನ್ನ ಪಾಡಿಗೆ ತಾನು ವಟುಗುಡುತ್ತಿತ್ತು. ರಾಜು ಮೊದಲೆ ನಿರ್ಧರಿಸಿರುವಂತೆ ಈಗ ಮೆಟಾಸಿಡ್ ಪ್ರಯೋಗಕ್ಕೆ ಇಳಿದ. ಅಷ್ಟರಲ್ಲೆ ಟಿ ವಿ ಯಲ್ಲಿ ಶುರುವಾದ ವಾರ್ತೆಯಲ್ಲಿ ಒಬ್ಬ ಇವನಂತೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಕುಡಿದು ವಿಲವಿಲನೆ ಒದ್ದಾಡುತ್ತಿರುವುದನ್ನು ತೋರಿಸುತ್ತಿದ್ದರು. ಈ ಸಾವು ಇಷ್ಟೋಂದು ಯಾತನಾದಾಯಕ ವಾಗಿದ್ರೆ ಬೇಡ ಅಂತ ವಿಷದ ವಿಷಯವನ್ನು ಅಲ್ಲಿಗೆ ಸಮಾಪ್ತಿಗೊಳಿಸಿದ
ಈಗ ಅವನ ಕಣ್ಣು ಮೂರನೇಯ ವಸ್ತುವಿನತ್ತ ತಿರುಗಿತು ತಿಗಳರ ಪೇಟೆಯಿಂದ ತಂದಂತಹ ಚೂರಿ ನಾನಿರುವಾಗ ಚಿಂತೆ ಯಾಕೆ ಬಾ ಬಾ ಎನ್ನುವಂತೆ ಫಳ ಫಳನೆ ಹೊಳೆಯುತ್ತಿತ್ತು. ಇದರಿಂದಲಾದರು ತನ್ನ ಪ್ರಯತ್ನ ಸಫಲವಾಗಲಿ ಎಂದು ಚೂರಿ ಕೈಗೆತ್ತಿಕೊಂಡು ಅದರ ಹರಿತ ಪರೀಕ್ಷಿಸಲು ಬೆರಳಿನಿಂದ ಒಮ್ಮೆ ಸವರಿದ, ಕೈಕೆಂಪಾಗಿ ಕೈಯಿಂದ ರಕ್ತ ತೊಟ್ಟಿಕ್ಕಲಿಕ್ಕೆ ಶುರುವಾಯಿತು. ಚೂರು ಗಾಯವಾಗಿದ್ದಕ್ಕೆ ಇಷ್ಟೊಂದು ಯಮಹಿಂಸೆಯಾಗಬೇಕಾದರೆ ಇನ್ನೂ ಚೂರಿ ಎದೆಯಾಳಕ್ಕೆ ಇಳಿದರೆ ಇನ್ನೆಷ್ಟು ಯಾತನೆಯಾಗಲಿಕ್ಕಿಲ್ಲವೆಂದು ಅದನ್ನು ಅಲ್ಲಿಗೆ ಕೈಬಿಟ್ಟ.
ಒಮ್ಮೆಲೆ ಅವನಿಗೆ ತನ್ನ ಮೇಲೆಯೆ ನಾಚಿಕೆ ಬಂದು ಬಿಟ್ಟಿತು ಸಾಯುವುದಕ್ಕೂ ಆಗುತ್ತಿಲ್ಲ ತನ್ನಿಂದ ಎಂದು. ಮತ್ತೊಂದು ಕ್ಷಣಕ್ಕೆ ತನ್ನ ಮೇಲೆ ಕೋಪ ಬಂದಂತಾಗಿ ರಪರಪ ತನ್ನನ್ನು ತಾನೆ ಹೊಡೆದುಕೊಂಡು ವಿಕೃತವಾಗಿ ನರಿ ಉಳಿಡುವ ತರಹ ಅಳುತ್ತ ಕೂತು ಬಿಟ್ಟ ಹತ್ತು ನಿಮಿಷ ಅತ್ತು ಹಗುರಾಗಿದ್ದರಿಂದ ಅವನಲ್ಲಿ ಹೊಸ ಯೋಜನೆ ಮೂಡಿತ್ತು. ಕಣ್ಣಿರು ಒರೆಸಿಕೊಂಡು ತನ್ನ ಕೋಣೆಯಿಂದ (ಅವನ ಕೋಣೆ ಐದನೇಯ ಮಹಡಿಯಲ್ಲಿತ್ತು ಮತ್ತು ಅದೇ ಕೊನೆಯ ಮಹಡಿ) ಹೊರ ಬಂದವನೆ ಎದುರಿಗಿದ್ದ ಸೊಂಟದೆತ್ತರದ ಗ್ರಿಲ್ಲಿನ ಕಡೆಗೆ ನಡೆದ ಅಲ್ಲಿಂದ ಕೆಳಗೆ ನೆಗೆದರೆ ದೇಹ ನೆಲ ತಲುಪುವುದರ ಒಳಗೇ ದೇಹದಿಂದ ಪ್ರಾಣ ದೂರವಾಗುತ್ತದೆ ಎಂದು ಅವನ ಎಣಿಕೆಯಾಗಿತ್ತು. ಅಷ್ಟರಲ್ಲಿ ಅದೇ ಗ್ರಿಲ್ ಮೇಲೆ ಸರ್ಕಸ ಮಾಡುತ್ತಿದ್ದ ಒಂದು ಪುಟ್ಟ ಹಲ್ಲಿ ಆಯತಪ್ಪಿ ಕೆಳಗೆ ಬಿದ್ದು ತನಗೆ ಏನೂ ಆಗೇ ಇಲ್ಲವೆನ್ನುವಂತೆ ಅಲ್ಲಿಂದ ಹೊರಟು ಹೋಯಿತು. ಇದರಿಂದ ತಾನು ಇಲ್ಲಿಂದ ನೆಗೆದರೆ ಕೇವಲ ಕೈಕಾಲು ಮುರಿಯಬಹುದು ಎನಿಸಿ ಅದಕ್ಕೂ ಇತಿಶ್ರೀ ಹಾಡಿದ. ಈ ಎಲ್ಲ ಘಟನೆಗಳಿಂದ ಅವನ ನಿರ್ಧಾರವೇ ಬದಲಾದಂತಾಗಿ ಸಾಯುವ ಯೋಚನೆಯೇ ತಪ್ಪೆನಿಸಿತು ಒಂದೇ ಕ್ಷಣ ಅಷ್ಟೇ. ಮರುಕ್ಷಣವೇ ಮೂರು ದಿನದಿಂದ ಆಫೀಸಿಗೆ ಹೋಗದೆ ಇರುವುದು ಮತ್ತು ಅದಕ್ಕೆ ಕಾರಣ ಗೊತ್ತಿರುವ ಕಲೀಗ್ಸಗಳು ನಾನು ಮತ್ತೆ ಆಫೀಸಿಗೆ ಹೊದರೆ ಇನ್ನಷ್ಟು ಅವಮಾನ ಮಾಡುತ್ತಾರೆ ಎನಿಸಿ ತಾನು ಮಾಡುತ್ತಿರುವುದೆ ಸರಿ ಎನಸಿತು ಅವನಿಗೆ.
ಎಲ್ಲಾ ಪ್ರಯತ್ನಗಳು ವಿಫಲವಾಗಿ ಏನೂ ತೊಚದೆ ರಾಜು ಕೋಣೆಯ ಬೀಗ ಹಾಕಿ ಚಹಾ ಕುಡಿಯಲೆಂದು ರಸ್ತೆಯತ್ತ ನಡೆದ . ಬೇಕರಿಯಲ್ಲಿ ಚಹಾ ಕುಡಿಯುತ್ತ ರಸ್ತೆಯಲ್ಲಿ ರಭಸವಗಿ ಸಾಗುತ್ತುದ್ದ ವಾಹನಗಳ ಕಡೆಗೆ ನೋಡಿದಾಗ ಅವನ ಕಣ್ಣುಗಳು ವಿಚಿತ್ರವಾಗಿ ಮಿನುಗಿದವು. ಬಸ್ಸಿನ ಕೆಳಗೆ ತಲೆ ಸಿಕ್ಕು ಬಿಟ್ಟರೆ ಪ್ರಾಣ ಹೋಗಿದ್ದು ಸಹ ಗೊತ್ತಾಗುವುದಿಲ್ಲವೆನಿಸಿ ಅತ್ತ ಹೆಜ್ಜೆ ಹಾಕಿದ ಅಷ್ಟರಲ್ಲಿ ಅಪ್ಪ ಈ ತಿಂಗಳ ತನ್ನ ಕಣ್ಣಿಗೆ ಆಪರೇಷನ ಮಾಡೀಸಬೇಕು ಎಂದದ್ದು ನೆನಪಾಯಿತು ಸದ್ಯದ ತೊಂದರೆಗಿಂತ ಅದೇನು ಅಷ್ಟು ಮಹಾ ಅನಿಸಲಿಲ್ಲ ಅವನಿಗೆ.ಮತ್ತೆ ಮುಂದುವರೆದ ಪಾಪಿ ಚಿರಾಯು ಎನ್ನುವಂತೆ ಅವನು ಹೊಗುತ್ತಿದ್ದ ಹಾಗೆ ಟ್ರಾಫಿಕ್ಕಿನ ಕೆಂಪು ದೀಪ ಹತ್ತಿಕೊಂಡಿತು. ಸಿಗ್ನಲ್ ಬಿಳುವುದನ್ನೆ ಕಾಯುತ್ತ ಅವನ ಪಕ್ಕದಲ್ಲೆ ಸ್ಕೂಟಿಯ ಮೇಲೆ ಕುತಿದ್ದ ಒಂದು ಹೆಣ್ಣು ಆಕೃತಿ ಹೆಲ್ಮೆಟ್ ತೆಗೆದು ಅವನ ಕಡೆ ನೋಡಿ ಸಂತೋಷದಿಂದ ಕೂಗು ಹಾಕಿತು. ನೋಡಿದರೆ ಅವಳ ರಾಜುನನ್ನು ತಿರಸ್ಕರಿಸಿದವಳು. ಸ್ಸಾರಿ ರಾಜು ನಿನ್ನ ಅರ್ಥಮಾಡ್ಕೊಳ್ಳಕೆ ಆಗಲಿಲ್ಲ ನನ್ನಿಂದ ನಿನಗೆ ಏನೆನೋ ಅಂದು ಬಿಟ್ಟೆ ಸ್ಸಾರಿ ಡಿಯರ್. ನಿನಗೆ ಫೋನಮಾಡೋಣಂದ್ರೆ ಮೂರು ದಿನದಿಂದ ನಿನ್ನ ಫೋನ ಬೇರೆ ಸ್ವಿಚ್ ಆಫ್ ಅಂತ ಬರ್ತಿತ್ತು. ಮತ್ತೊಮ್ಮೆ ಸ್ಸಾರಿ ಕೇಳಿ ನಾನು ನಿನ್ನನ್ನು ಅಷ್ಟೇ ಪ್ರೀತ್ಸತಿನಿ ಕಣೊ ಅಂದಳು . ಹಾಂ!!!! ಅಷ್ಟೇ ಇವನ ಬಾಯಿಂದ ಹೊರಟ ವಾಕ್ಯ, ರಾಜು ತನ್ನ ಯಾತ್ರೆ ಮುಗಿಸಿ ಹೊರಟು ಹೋಗಿದ್ದ.

Sunday, January 6, 2008

ಕಾಡ ಬೆಳದಿಂಗಳು

ಅಳಿದು ಅಳಿದು ಪೋಪ ಮಕ್ಕಳಿದ್ದೇಕೆ
ತಿಳಿದು ಬುದ್ಧಿಯ ಪೇಳದ ಗುರುವೇಕೆ!

ಇದನ್ನು ಕಾಡಬೆಳದಿಂಗಳು ಸಿನಿಮಾದಲ್ಲಿ ಸರಸ್ವತಿ ಅಮ್ಮ ಮಕ್ಕಳಿಗೆ ಪಠಿಸುತ್ತಿರುತ್ತಾರೆ. ಮೇಲಿನ ಎರಡೇ ಸಾಲು ಸಾಕು ಈಗಿನದ್ದನು ಹೇಳಲು. ಸುಧೀಷ್ಣೆ ರಾಮೊಹಳ್ಳಿಗೆ ಕಾಲಿಟ್ಟಾಗ ಅಲ್ಲಿ ಕೇವಲ ವಯಸ್ಸಾದ ಹಿರಿ ತಲೆಗಳೆ ಕಾಣುತ್ತವೆ ಅವಳಿಗೆ. ಅವಳಿಗೆ ಸಹಾಯಕನಾಗಿ ದೊರೆಯುವ ಅದೇ ಹಳ್ಳಿಯ ಏಕೈಕ ಹುಡುಗ ಕರಿಯ ಸಹ ಬೆಂಗ್ಳೂರಲ್ಲಿ ಕೆಲಸ ಕೊಡಸ್ತಿರಾ ಅಂತ ಅವಳನ್ನೆ ಕೆಳ್ತಾನೆ. ಹಳ್ಳಿಯ ಯುವಕರು ತಾವು ಕಲೆತ ವಿದ್ಯೆಗೆ ಪ್ರಶಸ್ತ ಸ್ಥಳವೆಂದರೆ ಬೆಂಗಳೂರು ಎಂದು ಅಲ್ಲಿಗೆ ಹೋದೆರೆ. ಮತ್ತೊಂದು ಕಡೆ ರಾಮೊಹಳ್ಳಿ, ಪುಟ್ಟಳ್ಳಿ ಮುಂತಾದ ಸುತ್ತಮುತ್ತಲಿನ ಹಳ್ಳಿಗಳು ಸಂರಕ್ಷಿತ ಅರಣ್ಯಪ್ರದೇಶದಡಿಯಲ್ಲಿ ಬರುತ್ತವೆ ಎಂದು ಅಲ್ಲಿಯ ಜನರನ್ನು ಒಕ್ಕಲೆಬ್ಬಿಸುವ ಸರಕಾರದ ಪ್ರಯತ್ನದ ವಿರುದ್ಧ ಬೆಂಗಳೂರಿಗೂ ಹೋಗದೆ ಮನೆಯ ಮುಖವನ್ನೂ ನೋಡದ ಬೆರಳೆಣೆಕೆಯಷ್ಟು ಯುವಕರಿಂದ ಹೋರಾಟ. ಮಾಹಾನಗರ ಸೇರಿದ ಮಕ್ಕಳ ಪೋಷಕರ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಿ ಅದನ್ನೆ ಎನ್ ಕ್ಯಾಶ ಮಾಡಿಕೊಳ್ಳುವ ಮೀಡಿಯಾದವರ ಅತೀ ಬುದ್ಧಿವಂತಿಕೆ. ಇನ್ನೊಂದು ಕಡೆ ಸತ್ತವನು ತನ್ನ ಮಗ ಅಲ್ಲವೆಂದು ಹೇಳಿ ನಿಷ್ಕರುಣಿಯಾಗಿ ಕಾಣುವ ಸದಾಶಿವಯ್ಯನವರು ದ್ವೀತಿಯಾರ್ದದಲ್ಲಿ ಅವರು ಅದಕ್ಕೆ ಕೊಡುವ ಕಾರಣ"ಮಗ ಇನ್ನೂ ಬದುಕಿದಾನೆ ಅಂತ ತಿಳ್ಕೊಂಡೆ ನನ್ನ ಹೆಂಡತಿ ಇನ್ನೂ ಬದ್ಕಿದಾಳೆ ಅವಳಿಗೆ ಅವನು ಸತ್ತು ಹೋದ ಸುದ್ದಿ ಗೊತ್ತಾದ ದಿನವೇ ಅವಳು ಸತ್ತು ಹೋಗುತ್ತಾಳೆ" ಇಂತಹವೆ ಇನ್ನುಷ್ಟು ಹೃದಯಂಗಮ ದೃಶ್ಯಗಳಿವೆ ಕಾಡಬೆಳದಿಂಗಳು ಸಿನಿಮಾದಲ್ಲಿ.

ಎ ಸಿ ಕ್ಯಾಬಿನಲ್ಲಿ ಲ್ಯಾಪಟಾಪ ಮುಂದೆ ಕೂತು, ದೂರದಲ್ಲಿ ಎಲ್ಲೋ ವಿದೇಶದಲ್ಲಿರುವ ಬಾಸಗಳ ಬೈಗುಳಗಳನ್ನೆ ಹೋಗಳಿಕೆಯಾಗಿ ಸ್ವಿಕರಿಸಿ, ವಿಕೆಂಡುಗಳಲ್ಲಿ ಶಾಪಿಂಗು, ಮಲ್ಟಿಪ್ಲೆಕ್ಸು, ಪಬ್ಬು ಕ್ಲಬ್ಬು ಅಂತ ಸುತ್ತುವ ಬಹುತೇಕ ಜನರಿಗೆ ಅಪ್ಪ, ಅಮ್ಮ ನೆನಪಾಗುವುದು ಯಾವುದಾದರು ಹಬ್ಬಗಳಲ್ಲೋ ಅಥವಾ ಆನಿವರ್ಸರಿಗಳಲ್ಲೋ ಮಾತ್ರ. ಇನ್ನೂ ಕೆಲವೊಬ್ಬರಿಗೆ ಇವರನ್ನು ವಿದ್ಯಾವಂತರನ್ನಾಗಿ ರೂಪಿಸುವ ಅಪ್ಪ ಅಮ್ಮಂದಿರು ಅನ್ ಏಜುಕೆಟೆಡ್ ಓಲ್ಡ್ ಪೀಪಲ್ . ಇಂತಹವರೆಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ ಕಾಡಬೆಳದಿಂಗಳು ನೋಡಿದ ನಂತರ ಅಕಸ್ಮಾತ ಪಾಪಪ್ರಜ್ಞೆ ಅಂತ ಏನಾದರೂ ಕಾಡಿದರೆ ಅಪ್ಪ ಅಮ್ಮಂದಿರಿಗೆ ಒಂದು ಕ್ಷಮೆಯನ್ನಾದರೂ ಕೇಳಿ ತಕ್ಕ ಮಟ್ಟಿಗೆ ಪ್ರಾಯಶ್ಚಿತ್ ಪಡಬಹುದು ಕೆಲವೊಬ್ಬರಿಗೆ ಆ ಭಾಗ್ಯವು ಇರುವುದಿಲ್ಲ.

ದುರದೃಷ್ಟದ ಸಂಗತಿಯೆಂದರೆ ನಾವು ಇಂತಹ ಚಿತ್ರಗಳಿಗೆ ಕಲಾತ್ಮಕ ಚಿತ್ರಗಳೆಂದು ಹಣೆಪಟ್ಟಿ ಅಂಟಿಸಿಬಿಡುತ್ತೆವೆ. ಮೊದಲನೆದಾಗಿ ಅವುಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ ಅದರಿಂದಾಗಿಯೆ ಹೆಚ್ಚು ಜನರನ್ನು ತಲಪುವುದು ಇಲ್ಲ. ಸಿನಿಮಾ ನೋಡದವರು ಜೋಗಿಯವರ ಮನೆ http://jogimane.blogspot.com/2007/07/blog-post_26.html ಯಲ್ಲಿ ಈ ಕತೆಯನ್ನು ಓದಬಹುದು

Friday, January 4, 2008

ಯೋಗರಾಜ ಭಟ್,ರ ಇಷ್ಟೆಲ್ಲ ಅಲ್ಲ




ಆಗಿದ್ದೆ ಏಕಾಂಗಿ
ಆದರೆ ಇಷ್ಟೆಲ್ಲಾ ಅಲ್ಲ...
ಇದ್ದೆ ನಾ ಮಂಕಾಗಿ
ಆದರೆ ಇಷ್ಟೆಲ್ಲ ಅಲ್ಲ...

ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಆಗಾಗ ಸುಮ್ಮನೆ ಸಾಯಬೇಕೆನಿಸುತ್ತಿತ್ತು...
ಆದರೆ ಇಷ್ಟೆಲ್ಲ ಅಲ್ಲ...

ಕಡಲ ಮದ್ಯ ಬಾಯಾರಿ ನಿಂತರೂ ಒಂತೊಟ್ಟು ನೀರಿಲ್ಲ
ಮೊದಲು ಮರುಭೂಮಿಯಲ್ಲಿದ್ದಾಗ
ದಾಹವೆಂದರೇನೆಂದೇ ಗೊತ್ತಿರಲಿಲ್ಲ...

ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಕಾರಣವಿಲ್ಲದೇ ಎದೆ ಬರಡಾದ ಉದಾಹರಣೆಯಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನೀನೇಕೋ ನಿಲ್ಲಲಿಲ್ಲ
ಇನ್ನೆಂದೂ ನೀನಿಲ್ಲ...

ನೀ ದೂರನಡೆಯುವಾಗಿನ ನಿನ್ನ ಬಿಳಿಬೆನ್ನ ಮೇಲಾಣೆ
ಹಾಕಿ ಪ್ರಯೀಜನವಿಲ್ಲ...
ಆದರೂ ಆಣೆಯಿಟ್ಟು ಹೇಳುವೆ
ಈ ಹಾಳು ನಿಟ್ಟುಸಿರಿನ ದೆವ್ವಕ್ಕೆ
ನನ್ನೆದೆ ಬಿಟ್ಟರೆ ಬೇರೆ ಮನೆಯಿಲ್ಲ...

ನೀನಿದ್ದಿದ್ದರೆ ಏನೆಲ್ಲ ಆಗಬಹುದಿತ್ತಲ್ಲ
-ಎಂಬ ಕುರುಡು ಕನಸೊಂದಕ್ಕೆ ಸಾವೇ ಇಲ್ಲ...
ನೀ ಹೊರಟ ಕೊನೆ ಘಳಿಗೆಯಲಿ ಕೂಡಾ
ನೀ ತಿರುಗಿ ನೋಡಿ ನಗಬಹುದೆಂಬ ಆಸೆ ಬದುಕಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನಿನಗೆ ಹೇಳಬೇಕೆಂದಿರುವುದು
ಇದಾವುದೂ ಅಲ್ಲವೇ ಅಲ್ಲ;


ಕಿತ್ತಪದಗಳಿಗೆ ಅನಿಸಿದ್ದೆಲ್ಲ
ಹೇಳುವ ತಾಕತ್ತಿಲ್ಲ
ಎಂದು ಗೊತ್ತಿದ್ದರೂ ಕೂಡಾ-
ಮತ್ತೆ ಮತ್ತೆ ನೋವು ಬಣ್ಣಿಸುವ

ದರಿದ್ರ ಯತ್ನದಲಿ
ಏನೋ ‘ಸುಖ ’ ಸಿಗುವ
ಭಯಂಕರ ಭರವಸೆಯಿತ್ತು...
ಆದರೆ ಇಷ್ಟೊಂದಲ್ಲ...!
ಆದರಿಂದ ಇದ್ಯಾವುದೂ
ಬರೀ ‘ಇಷ್ಟೇ ’ ಅಲ್ಲ...!(ನಿಟ್ಟುಸಿರು)


ಇದು ಯೋಗರಾಜ ಭಟ್ರು ಕನ್ನಡಪ್ರಭ ದೀಪಾವಳಿ ವಿಶೇಷಾಂಕಕ್ಕೆ ಬರೆದ ಕವಿತೆ (ಪುಟ ೨೩)
ತುಂಬಾ ಕಾಡಿದ ಕವಿತೆ ನೀವೂ ಓದಿ....

Wednesday, December 26, 2007

ಎನ್ನ ಭವದ ಕೇಡು

ಈ ಕಾದಂಬರಿಯ ಬಗ್ಗೆ ಎನಾದರೂ ಬರೆಯದೆ ಇರೋಕೆ ನನ್ನಿಂದ ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನನ್ನನ್ನು ಆವರಿಸಿಕೊಂಡಿದೆ.
ಇದರಲ್ಲಿ ಬರುವ ಗೋವರ್ಧನರಾಯರು, ಪೇಶ್ವೆ ಕಾಲಕ್ಕೆ ಅಹ್ಮದ ನಗರದಿಂದ ನೆಲೆಕಿತ್ತು ಮೂಡಿಗೆರೆಗೆ ಬಂದ ಅವರ ತಂದೆ ಶ್ರೀಹರಿರಾಯರು, ಗೋವರ್ಧನರಾಯರ ಎರಡನೇಯ ಸಂಸಾರ ರಾಧಾ,ಮಕ್ಕಳಾದ ಗಂಗೆ, ಗೋದಾವರಿ ಯಮುನೆ, ಸರಸ್ವತಿ, ರಾಧಾ ಅಂಬಕ್ಕ, ಕಣ್ಣಿರಿನ ಹುಡುಗಿಯನ್ನು ಡೋಲಾಯನ ಸ್ಥಿತಿಗೆ ದೂಡುವ ವಾಸುದೇವ, ಡಾಕ್ಟರ ಮಗ ಅಜಿತ, ಗೋವರ್ಧನರಾಯರ ರಾಜಕಾರಣಿ ಸ್ನೇಹಿತ ಪಂಪಾಪತಿ,ದೂರ್ತ ನೌಕರ ಚಿನ್ಸಾಮಿ, ಸಮಯದ ಫಾಯಿದೆ ತೆಗೆದುಕೊಳ್ಳುವ ಕೃಷ್ಣಮೂರ್ತಿ,ದ್ರೈವರ್ ಅಬ್ಬೂ, ಸಂಗೀತಗಾರ ಬಸ್ರಾಜ,ಇವರೆಲ್ಲರೂ ತಮ್ಮ ತಮ್ಮ ಪಾತ್ರ ಮುಗಿಸಿ ಎದ್ದು ಹೋದರು ಬೃಂದಾವನ ಬಿಡಲೊಲ್ಲೆ ಎನ್ನುವ ಇವರೆಲ್ಲರ ಅಧಿನಾಯಕಿ ಮಾಮಿ,ಅವಳ ಸಾವಿನ ವಾಸನೆ ಪತ್ತೆ ಹಚ್ಚುವ ವಿದ್ಯೆ, ಮಾಮಿಯ ತಿಂಗಳ ಸ್ನಾನದ ವೃತ, ಬೃಂದಾವನದ ಹಿತ್ತಲಿನ ಕರಿಬೇವಿನ ಕಂಪು, ನಮ್ಮನ್ನು ಕಾದಂಬರಿ ಮುಗಿಸಿದ ಮೇಲೂ ಕಾಡುತ್ತಿರುತ್ತವೆ.

ಹೋಟಲ್ಲುಗಳ ಸರಮಾಲೆಯೆ ಇದ್ದ ಮನೆಯಲ್ಲಿ ಗಂಗೆ ಸತ್ತ ಮೂರೇ ದಿನಕ್ಕೆ ಮನೆಯಲ್ಲಿ ತಿನ್ನಲು ಏನು ಇರುವುದಿಲ್ಲ . ಇದು ಕಾದಂಬರಿ ಓದುವಾಗ ಅರಗಿಸಿಕೊಳ್ಳಲು ಕಷ್ಟವಾದರು ವಾಸ್ತವತೆಗೆ ಹತ್ತಿರವಾದದ್ದೆ.
ಡಾವಣಗೆರೆಯಲ್ಲಿ ಕಾಟನ್ ಮಿಲ್ಲುಗಳಿದ್ದಾಗ ನಡೆಯುತ್ತಿದ್ದ ದರ್ಬಾರಗಳು, ನಿಂತಾಗ ಒಂದೊಂದಾಗಿ ಬಿದಿಗೆ ಬಿದ್ದ ಸಂಸಾರಗಳು, ಅಲ್ಲಿನ ಯೂನಿಯನ್ನಗಳು,ಅದರ ಲೀಡರ್ರುಗಳು, ಅವರ ಕಚ್ಚಾಟಗಳು ಕಣ್ಣಿಗೆ ಕಟ್ಟುವಂತಿವೆ.
ಇವೆಲ್ಲಾ ಒಂದು ಕಡೆಯಾದರೆ ಗೋವರ್ಧನರಾಯರ ಸಂಸಾರಭವ ಹಂತಹಂತವಾಗಿ ಕುಸಿಯುವ ರೀತಿ ಕಲ್ಲು ಹೃದಯವನ್ನು ಕರಗಿಸುತ್ತದೆ. ಇನ್ನೊಂದು ಕಡೆ ನಮಗೆ ಸುಳಿವೆ ಕೊಡದೆ ಕಥೆಯೊಂದಿಗೆ ಸಾಗುವ ಸಂಗೀತ, ಅಲ್ಲಿ ಅರಳುವ ಪ್ರೀತಿ, ಅಡುಗೆ ಮನೆಯಲ್ಲೆ ಜಗತ್ತು ಮತ್ತು ತನ್ನ ಪ್ರೀತಿಯನ್ನು ಕಂಡುಕೊಳ್ಳುವ ಸರಸ್ವತಿಯ ರೀತಿ, ಸಂಸಾರ ಮತ್ತು ಮಕ್ಕಳು ಬೇಡವೆಂದ ಮಾಮಿಯ ಯೌವನದ ಮೊದಲ ಹಂತದಲ್ಲಿ ಮುಗ್ಗರಿಸಿದ ಪ್ರೇಮ ಪ್ರಕರಣ,ನೆರಳೆ ಬಣ್ಣದ ಚಾಯೆ ಇಡೀ ದಾವಣಗೆರೆಗೆ ಆವರಿಸುವ ವಿಸ್ಮಯ, ನಾವೆಲ್ಲಾ ಮರೆತೆ ಹೋಗಿರುವ ಶಾವಿಗೆ ಹೊಸೆಯುವ ಸಂಭ್ರಮ, ಕಾದಂಬರಿಯನ್ನು ಹಂಚಿಕೊಂಡರೆ ಮತ್ತೊಮ್ಮೆ ಇಡೀ ಕಾದಂಬರಿಯನ್ನೆ ಹೇಳಬೇಕಾದಿತು.

ಯಮುನೆ ಮತ್ತು ಗೋದಾವರಿಯ ಪಾತ್ರಗಳನ್ನು ಹೀಗೂ ಹೇಳಬಹುದೆನೊ ಮನುಷ್ಯ ಯೋಚಿಸುವುದನ್ನು ನಿಲ್ಲಿಸಿದರೆ ಯಮುನೆಯಂತಾಗುತ್ತಾನೆ। ದುಡುಕಿದರೆ ಗೋದಾವರಿಯಂತಾಗುತ್ತಾನೆ। ನಾವು ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ನಾವು ಕೇವಲ ಇದನ್ನು ಓದುವುದಿಲ್ಲ ಪಾತ್ರಗಳೆ ನಾವಾಗುತ್ತೆವೆ ಅದು ಸುರೇಂಧ್ರನಾಥರ ಕಥೆ ಹೇಳುವ ಪರಿ। ಚಂದನೆಯ ಕಾದಂಬರಿ ಕೊಟ್ಟ ಸುರೇಂಧ್ರನಾಥರಿಗೂ ಛಂದವಾಗಿ ಪ್ರಕಟಿಸಿದ ವಸುಧೇಂದ್ರರಿಗೂ ನನ್ನ ಧನ್ಯವಾದಗಳು

ನೀವು ಕೊಂಡು ಓದಿ

Saturday, December 22, 2007

ಇನ್ನಷ್ಟು ಮನಸ್ಸಿನ ಮಾತುಗಳು

ಪ್ರತಿಯೊಬ್ಬರು ಅಮರ ಪ್ರೇಮಿಗಳಾಗಿದ್ದರೆ
ಗಲ್ಲಿಗೊಂದು ತಾಜಮಹಲಗಳಾಗುತ್ತಿದ್ದವು.


ಬದುಕು ಕಾಮನಬಿಲ್ಲಿದ್ದಂತೆ.
ಬಣ್ಣಗಳನ್ನು ಆರಿಸಿಕೊಳ್ಳುವವರ ಮೇಲೆ ಅವರ ಬದುಕು ನಿರ್ಧಾರವಾಗುತ್ತದೆ.
ಕೆಲವೊಬ್ಬರು ಏಳು ಬಣ್ಣಗಳನ್ನ ಎತ್ತಿಟ್ಟುಕೊಂಡರೆ
ತುಂಬ ಜನ ಕಪ್ಪು ಬಿಳುಪನ್ನ ಮಾತ್ರ ಆರಿಸಿಕೊಳ್ಳುತ್ತಾರೆ.

ಗೆಳೆತನ ಮತ್ತು ಪ್ರೀತಿ ಸವಿಯುವಂತಿರಬೇಕು
ಸಹಿಸಿಕೊಳ್ಳುವಂತಿರಬಾರದು!



ಎಲ್ಲರೂ ಪ್ರೀತಿಸುತ್ತಾರೆ
ಸ್ವಲ್ಪ ಜನ ಮತ್ತೊಬ್ಬರನ್ನು
ತುಂಬ ಜನ ತಮ್ಮನ್ನು!

ಬದುಕಿಗೂ ಪ್ರೀತಿಗು ಇರುವ ವ್ಯತ್ಯಾಸ
ಬದುಕು ತನ್ನನ್ನು ಪ್ರೀತಿಸಲು ಹೇಳುತ್ತೆ
ಪ್ರೀತಿ ಮತ್ತೊಬ್ಬ್ಬರನ್ನು ಪ್ರೀತಿಸಲು ಹೇಳುತ್ತೆ
ತನ್ನನ್ನು ಪ್ರೀತಿಸದವ ಈ ಜಗದಲ್ಲಿ ಬದುಕಲಾರ!

Wednesday, December 19, 2007

ಕೆಲವೊಂದು ಹನಿಗಳು

ಹಾಗೆ ಮನಸ್ಸಿಗೆ ಮೂಡಿದ್ದು


ಭ್ರಮೆಯೆಡೆಗೆ ಸೆಳೆಯುವ ಹೂವಿಗಿಂತ
ವಾಸ್ತವತೆಯೆಡೆಗೆ ಕೈಹಿಡಿದು ಜಗ್ಗುವ ಮುಳ್ಳೆ ವಾಸಿ

ಕಲ್ಲು ಕರಗುವ ಸಮಯಕ್ಕೆ ಬಂದ ಅವಳು
ನೆಸರನ ಮೊದಲ ಕಿರಣ ಭೂವಿಗೆ ಸೊಕುವ ಮೊದಲೆ
ಹೋರಟು ಹೋದಳು
ಕರಗಿದ ಕಲ್ಲು ಶೀಲೆಯಾಗಿತ್ತು


ಚುರು ವಿಶ್ವೆಶ್ವರ ಭಟ್ಟರ ವಕ್ರತುಂಡೋಕ್ತಿ ತರಹವಿದ್ದರು ಇವು ಅವಲ್ಲ . ಆದರೆ ಇವು ಅಂತಹದೆ
ನಿಮಗೆ ಎನೆನ್ನಿಸುತ್ತದೆ?? ತಿಳಿಸಿ

ಹುಡುಗಿಯರ ಕೈಯಲ್ಲಿ ಮೊಬೈಲ್ ಸಿಕ್ಕರೆ
ಅದರಲ್ಲೂ ಕನ್ನಡಿ ಹುಡುಕುತ್ತಾರೆ

ಗಂಡಸರ ಕೈಗೆ ಮೊಬೈಲ್ ಬಿಲ್ಲ ಸಿಕ್ಕರು
ಹೆಂಗಸರ ಕೈಗೆ ಮೊಬೈಲ್ ಸಿಗಬಾರದು

ಮೊಬೈಲ್ ಬ್ಯಾಟರಿ ಮತ್ತು ಹುಡುಗಿಯರಿಗೆ ಹೆಚ್ಚು ವ್ಯತ್ಯಾಸವಿಲ್ಲ
ಎರಡು ಯಾವತ್ತಿದ್ದರು ಕೈ ಕೊಡುವಂತಹವೇ

ಹುಡುಗಿಯರ ಪ್ರೀತಿ, ಮೊಬೈಲ ನೆಟವರ್ಕು ಎರಡು
ಸಿಟಿಯಲ್ಲಿ ಇದ್ದಾಗ ಮಾತ್ರ ಹೆಚ್ಚಿಗೆ ಸಿಗೋದು

ಕೆಲವೊಂದು ಜನ ಆಗಾಗ ಮೊಬೈಲ್ ಬದಲಿಸಿದರೆ
ತುಂಬ ಜನ ಬಾಯಪ್ರೆಂಡು, ಗರ್ಲಫ್ರೆಂಡುಗಳನ್ನು ಮಾತ್ರ ಹೆಚ್ಚು ಬದಲಿಸುತ್ತಾರೆ



Sunday, December 9, 2007

ಲೇಖಕ.......!

ಅಯ್ಯೋ ಈ ಪೆನ್ನೂ ಮುದವಲ್ಲದಾ, ಇರೋದ ಇದ ಒಂದ ಪೆನ್ ಬ್ಯಾರೆ ತಗೋಳಾಕ ರೊಕ್ಕ ಸಯಿತ ಇಲ್ಲ ನನ್ನ ಹತ್ರ। ಈ ಪುಸ್ತಕ ಕನ್ನಡಕ್ಕ ಬದಲಿಸಿ ಕೊಟ್ರ ಸಾವಿರ ರೂಪಾಯಿ ಕೊಡ್ತೆನಿ ಅಂತ ಹೇಳ್ಯಾರ ಸುಭಾಷ ರೋಡಿನ್ಯಾಗಿರೊ ಬುಕ್ಕಿನ ಅಂಗಡಿ ಸವ್ಕಾರ. ಶೆಟ್ಟಿ ಅಂಗಡ್ಯಾಗ ಪೆನ್ ತರೋ ಟೈಮು ಅಲ್ಲ ಇದು, ಟೈಮ ಆಗಲೇ ರಾತ್ರಿ ಹನ್ನೆರಡ ಮಲಗಿರ್ತಾನ ಅಂವ. ನಾಳಿ ತನಕ ಹೇಂಗರ ಉಪವಾಸ ಇದ್ದೆನೀ, ಇಗೇನರ ಪೆನ್ ಸಿಗಲಿಲ್ಲಾ ಅಂದರ ನಾಳೆನೂ ಊಟ ಇಲ್ಲ ನಾಡದೂ ಇಲ್ಲ, ಹಂಗಂದ್ರ ನಾಡದ ನಾ ಸಾಯತೆನಾ. ಹೀಗೆ ಸಾಗಿತ್ತು ಅವನ ಯೋಚನಾ ಲಹರಿ.

ಅವನ ಹೆಸರು ಸೋಮಪ್ಪ, ದೇವರ ಗುಡ್ಡದಲ್ಲಿ ನೆಲೆಸಿದ್ದ ಮೈಲಾರಲಿಂಗನ ಭಕ್ತೆ ಪಾರವ್ವನ ಏಕೈಕ ಸಂತಾನ। ಪಾರವ್ವ ತಾನು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಗ್ವಾರವ್ವನ ಸೇವೆಯ ನೆರಳು ತಾಗದಂತೆ ಪಕ್ಕದ ರಾಣೇಬೆನ್ನೂರಿನ ಶಾಲೆಗೆ ಕಳುಹಿಸುತ್ತಿದ್ದಳು। ಪಾರವ್ವನ ಗಂಡ ದ್ಯಾಮಪ್ಪ, ದೇವರಗುಡ್ಡದ ಮೈಲಾರಲಿಂಗ ದೇವರ ಪಾದ ಸೆರಿ ಸುಮಾರು ವರ್ಷಗಳಾಗಿತ್ತು। ದೇವರಗುಡ್ಡದ ಪಕ್ಕದ ಹಳ್ಳಿ ಕೂನಬೇವಿನವಳಾದ ಪಾರವ್ವ, ದ್ಯಾಮಪ್ಪನ ಮದುವೆಯಾಗಿ ದೇವರಗುಡ್ದಕ್ಕೆ ಬಂದಾಗ ಅವಳಿಗೆ ಬರಿ ಹದಿನೈದು ವರ್ಷ, ಗಂಡ ದ್ಯಾಮಪ್ಪ ಅವರ ಮನೆಯ ಕುಲಕಸುಬಾದ ಗ್ವಾರಪ್ಪನ ವೇಷ ಧರಿಸಿ ಸುತ್ತಮುತ್ತ ಹಳ್ಳಿಗಳಲ್ಲಿ ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದ. ಹೆಗಲಮೆಲೆ ಒಂದು ದಪ್ಪನೆಯ ಕಂಬಳಿ, ಒಂದು ಕೈಯಲ್ಲಿ ಢಮರುಗ, ಇನ್ನೂಂದು ಕೈಯಲ್ಲಿ ತ್ರಿಶೂಲ, ಬಗಲಲ್ಲಿ ಬಂಡಾರ ತುಂಬಿದ ಚರ್ಮದಿಂದ ಮಾಡಿದಂದಹ ಉದ್ದನೆಯ ಜೋಳಿಗೆ, ತಲೆಯ ಮೇಲೆ ಕಪ್ಪನೆಯ ಉದ್ದು ಕೂದಲಿನ ಮುಂಡಾಸಿನಂತಹ ಟೊಪ್ಪಿಗೆ ಕಾಲಲ್ಲಿ ಭಾರಿ ಎನಿಸುವಂತಹ ಚರ್ಮದ ಚಪ್ಪಲಿಗಳನ್ನು ಧರಿಸಿ ಮನೆಗಳ ಮುಂದೆ ನಿಂತು ಏಳುಕೋಟಿ ,ಏಳುಕೋಟಿ ಎಂದು ಹುಂಕರಿಸಿದನೆಂದರೆ ಜನ ಭಯಭಕ್ತಿಯಿಂದ ಅವನನ್ನು ಮನೆಯೊಳಗೆ ಕರೆದು ಭಿಕ್ಷೆ ನೀಡುತ್ತಿದ್ದರು. ಗ್ವಾರಪ್ಪ ಆದಂತಹವರು ಯಾವುದೇ ಮನೆ , ನೆಲ, ಹೊಲಕ್ಕೆ ಕಾಲಿಟ್ಟರೆ ಅದು ಯಾವತ್ತೂ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ ಎಂದು ಪ್ರತೀತಿ ಯಾವತ್ತಿನಿಂದಲೂ ಇದೆ. ಅದಕ್ಕೆ ದೇವರಗುಡ್ಡದ ಸುತ್ತಮುತ್ತ ನಡೆಯುತ್ತಿದ್ದ ಹೊಲದ ಪೂಜೆ, ನಾಮಕರಣ, ಮನೆ ಪ್ರವೇಶ,ಮದುವೆ ಹೀಗೆ ಏನೇ ಶುಭ ಕಾರ್ಯಗಳಾದರೂ ದ್ಯಾಮಪ್ಪನಿಗೆ ಕರೆ ಹೋಗುತ್ತಿತ್ತು. ಸಂಪಾದನೆಯು ಚೆನ್ನಾಗಿತ್ತು. ಆದರೆ ಅವನ ಕುಡಿತದ ಚಟ ಅವನಿಗೆ ಈ ಭೂಮಿಯಿಂದಲೇ ಆಚೆ ನೂಕಿತ್ತು. ದ್ಯಾಮಪ್ಪ ಕಾಲವಾದಾಗ ಪಾರವ್ವನ ಹೊಟ್ಟೆಯಲ್ಲಿದ್ದ ಕೂಸಿಗೆ ಬರಿ ಐದೇ ತಿಂಗಳು, ಹೀಗಾಗಿ ಸೋಮನಿಗೆ ತಂದೆಯೆಂಬ ಮಾಹಾತ್ಮನ ಪರಿಚಯವಾಗಲೇ ಇಲ್ಲ ಪಾರವ್ವನು ಮಗನಿಗೆ ತನ್ನ ಪತಿದೇವರ ವಿಷಯ ಹೆಳಿ ಸಂಭ್ರಮಿಸಲಿಲ್ಲ. ಸೋಮನಿಗೆ ಐದು ವರ್ಷ ತುಂಬುವ ತನಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಾರವ್ವನಿಗೆ ಒಂದು ದಿನ ಸಕ್ಷಾತ ಮೈಲಾರಲಿಂಗ ದೇವರೆ ಕನಸಿನಲ್ಲಿ ಬಂದು ಕುಲಧರ್ಮ ಮರೆತೆನೆ ಪಾರವ್ವ ಎಂದು ಕೇಳಿದಂತಾಗಿತ್ತು. ಕನಸುಗಳ ಕಾಟ ಹೆಚ್ಚಾದಾಗ ಪಾರವ್ವ ತುಂಬ ತಳಮಳಗೊಂಡಿದ್ದಳು . ಆದರೆ ಆ ದಿನವೂ ಬಂದಿತ್ತು ಸೋಮ ಅವ್ವನ ಹೊಸ ವೇಷ ನೋಡಿ ಗಾಬರಿಯಾಗಿದ್ದ. ಹಣೆ ತುಂಬ ಭಂಡಾರ, ಕೈಯಲ್ಲಿ ತ್ರಿಶೂಲ, ಢಮರುಗ, ಆರು ವರ್ಷದ ಸೋಮ ತನ್ನ ಭಾಷೆಯಲ್ಲಿ ಅವ್ವನಿಗೆ ದೇವರು ಎಂದಿದ್ದ. ಅವನು ಶಾಲೆ ಬಿಟ್ಟು ತನ್ನಂತೆ ಇದೇ ಕಾಯಕಕ್ಕೆ ಇಳಿದಾನು ಎಂದು ಪಾರವ್ವ ಊರ ಗೌಡರ ಸಹಾಯದಿಂದ ಮಗನಿಗೆ ಪಕ್ಕದ ರಾಣೇಬೆನ್ನೂರಿನಲ್ಲಿ ಶಾಲೆಗೆ ಸೇರಿಸಿದ್ದಳು. ಅಷ್ಟು ಕಡುಬಡತನವಿಟ್ಟುಕೊಂಡು ಅವನನ್ನು ಪಿ ಯು ಸಿ ವರೆಗು ಓದಿಸಿದ್ದು ಆ ತಾಯಿಯ ಸಾಧನೆಯೆ ಸರಿ।

ಮಗನ ಪಿ ಯು ಸಿ ಮುಗಿದ ನಂತರ ಪಾರವ್ವ ಅವನನ್ನು ಅಲ್ಲೇ ರಾಣೇಬೆನ್ನೂರಿನ ಒಂದು ಅರಿವೆಯಂಗಡಿಯಲ್ಲಿ ಕೆಲಸಕ್ಕೆ ಸೇರಿಸುವ ಯೋಚನೆ. ಆದರೆ ಮಗನಿಗೆ ಇಷ್ಟು ಓದಿದ ತಾನು ಬಟ್ಟೆಯಂಗಡಿಯಲ್ಲಿ ಸೀರೆ ಮಡಿಚುವುದು ಕ್ಷುಲ್ಲುಕವಾಗಿ. ಅದಲ್ಲದೇ ಅವನಿಗೆ ಬರವಣಿಗೆಯ ಭೂತವೊಂದು ಮೆಟ್ಟಿಕೊಂಡು ಬಿಟ್ಟಿತ್ತು। ಅದಕ್ಕೆ ಸಾಕ್ಷಿಯಾಗಿ ಹಿಂದಿಯಲ್ಲಿ ಪ್ರಬಂಧ ಮಂಡಿಸಿದ್ದಕ್ಕೆ ಸಿಕ್ಕ ಮೊದಲ ಬಹುಮಾನವಿತ್ತು. ಅವನದು ಒಂದೇ ವಾದ ನಾನು ಕಾಲೇಜು ಕಲೆತದ್ದು ಮರವಾಡಿ ಅಂಗಡಿಯಲ್ಲಿಯಲ್ಲಿರುವ ಹೆಣ್ಣು ಗೊಂಬೆಗೆ ಸೀರೆ ಉಡಿಸುವುದಕ್ಕೆ ಅಲ್ಲ ಗೊತ್ತಾತ ಅವ್ವ . ಆಗೆಲ್ಲಾ ಪಾರವ್ವ, ಮಗನಿಗೆ ಯಾವುದೊ ಮಾಸ್ತರ ಭೂತ ಬಡಿದಿದೆ ಎಂದೇ ಯೋಚಿಸಿತ್ತಿದ್ದಳು . ಒಂದೆರಡು ಸಾರಿ ಮೈಲಾರಕ್ಕೆ ಹೋಗಿ ಹೇಳಿಕೆಯನ್ನು ಕೇಳಿಸಿಕೊಂಡು ಬಂದಿದ್ದಳು. ಆದರೆ ಸೋಮನಿಗೆ ಹಿಡಿದಿರುವುದು ಮಾಸ್ತರನ ಭೂತವಲ್ಲ , ಅದೇ ಊರಿನ ಪೂಜಾರಿಯ ಮಗಳು ಸಾವಿತ್ರಿಯ ಮೇಲಿನ ಪ್ರೀತಿಯ ಭೂತವೆಂದು ಪಾರವ್ವನಿಗೆ ಹೇಗೆ ತಿಳಿದಿತು.

ಆಗಿದ್ದು ಇಷ್ಟು ಸೋಮ ರಾಣೇಬೆನ್ನೂರಿನಲ್ಲಿ ಇದ್ದರು ಅವ್ವನ ಭೇಟಿಗಾಗಿ ಪ್ರತಿ ಭಾನುವಾರ ಉರಿಗೆ ಬರುತ್ತಿದ್ದ ಅಂತಹ ಒಂದು ಭಾನುವಾರ ಸಾವಿತ್ರಿಯು ಊರಿಗೆ ಬರುತ್ತಿದ್ದಳು ಅವಳ ಮೇಲೆ ಇವನಿಗೆ ಮೊದಲಿನಿಂದಲೂ ಮನಸ್ಸಿತ್ತು. ಆದ್ರೆ ಹೇಳಲಾರದೆ ತುಂಬ ವಿಲಿಗುಟ್ಟಿದ್ದ. ಆದರೆ ಅವತ್ತು ಇಲ್ಲದ ಧೈರ್ಯ ತಂದುಕೊಂಡು ಅಲ್ಲೇ ಭೀಮಣ್ಣನ ಓಲಾಡುತ್ತಿದ್ದ ಲಟಾರಿ ಟೆಂಪೋದಲ್ಲಿಯೇ ಕುಳಿತುಕೊಂಡು ಒಂದು ಅದ್ಭುತವೆನಿಸುವಂತಹ ಪ್ರೇಮಪತ್ರವನ್ನು ಹಿಂದಿ ಭಾಷೆಯಲ್ಲಿ ಬರೆದು ಅವಳ ಕೈಗಿಟ್ಟಿದ್ದ. ಅವಳು ಕೂಡ ಅದನ್ನು ಅಲ್ಲಿಯೇ ಓದಿ ತನ್ನದೇ ಆದ ರೀತಿಯಲ್ಲಿ. ಯಾಕ ಪ್ರೀತಿ ಗಿತಿ ಅಂತ ತಲಿ ಕೆಡಸಕೊತಿ ಸೋಮ ನಿಂದ ಬರವಣಿಗಿ ಏನೊ ಛಂದ ಐತಿ, ಬರೆ ಅದನ್ನ ನೋಡಿ ನಿನ್ನ ಮದುವಿ ಹೆಂಗ ಅಗೋದು ಅದರಾಗ ಎನರ ಒಂದ ಸಾಧಿಸಿ ತೋರಿಸು ಆವಾಗ ನಾನ ನಮ್ಮಪ್ಪಂಗ ಹೇಳ್ತೇನಿ ನಿನಗ ಕೊಟ್ಟ ಮದುವಿ ಮಾಡಂತ। ಅದನ್ನ ಬಿಟ್ಟ ಹುಚ್ಚ್ರಂಗ ಪತ್ರ ಬರದರ ಏನೂ ಸಿಗಂಗಿಲ್ಲ ನೋಡು ಅಂತ ಅವನನ್ನು ಸುಮ್ಮನಾಗಿಸಿದ್ದಳು. ಅವರ ಎಲ್ಲ ಮಾತುಕತೆಯು ಹಿಂದಿಯಲ್ಲೆ ಸಾಗಿದ್ದರಿಂದ ಯಾರಿಗು ಅಷ್ಟಾಗಿ ತಿಳಿಯಲಿಲ್ಲ. ಅಷ್ಟರಲ್ಲಿ ಊರು ಬಂದಿತ್ತು.

ಎಲ್ಲರೂ ಕೆಳಗೆ ಇಳಿದು ಸೋಮನು ಇಳಿಯುವಾಗ ಅವನನ್ನು ತಡೆದ ಡ್ರೈವರ್ ಭೀಮಣ್ಣ ತನ್ನ ಗಿತೋಪದೇಶ ಪ್ರಾರಂಭಿಸಿದ್ದ। ಆ ಹುಡುಗಿ ಹೇಳಿದ್ದು ನನಗೂ ಅರ್ಥ ಆತಲೆ ಸೋಮ, ನನಗು ಚೂರ ಮುಸಲರ ಭಾಷೆ ಗೊತ್ತ (ಭೀಮಪ್ಪನ ದೃಷ್ಟಿಯಲ್ಲಿ ಹಿಂದಿ ಎಂದರೆ ಮುಸಲ್ಮಾನಿ ಭಾಷೆ). ನೀನ ಇಲ್ಲೇ ಹುಡುಗಿ ನಿನಗ ದಕ್ಕೊಂಗಿಲ್ಲ ನೋಡ, ಅಕಿ ಬೇಕ ಅಂದ್ರ ನೀನ ಧಾರವಾಡಕ್ಕ ಹೋಗಬೇಕ ಅಲ್ಲಿ ಬರೆ ನಿನ್ನಂತ ಜನಾನ ತುಂಬ್ಯಾರಂತ ಕತಿ ,ಹಾಡ ಬರಿಯೊ ಮಂದಿ. ಅಲ್ಲಿ ಹೋಗಿ ಸ್ವಲ್ಪ ದಿನಾ ದುಡಿಯಲೆ ಅವಾಗ ನಿಂದು ಕತಿ, ಹಾಡು ಪೇಪರನ್ಯಾಗ ಬಂದಾವು ಪೆಪರನ್ಯಾಗ ಬಂದಮ್ಯಾಲೆನ ರೊಕ್ಕಾನು ಬರತೆತಿ ಇಲ್ಲಿದ್ರ ಅಷ್ಟ ನೀನ ಉದ್ದಾರ ಆದಹಂಗ. ಭೀಮಣ್ಣ ಅಷ್ಟು ಹೇಳಿದ್ದೆ ನೆಪ ಸೋಮನಿಗೆ, ಸಾವಿತ್ರಿಗೆ ತಾನೆನೆಂದು ತೋರಿಸುವುದಕ್ಕೆ ಒಂದು ಅಖಾಡ ಸಿಕ್ಕಂತಾಗಿತ್ತು. ಮಗನ ಹುಚ್ಚು ನಿರ್ಧಾರ ಕೇಳಿ ಪಾರವ್ವನಿಗೆ ದಿಗಿಲಿಗಿಡಾಗಿತ್ತು. ಪಾರವ್ವ ಜಪ್ಪಯ್ಯ ಅಂದರು ಸೋಮನಿಗೆ ಧಾರವಾಡಕ್ಕೆ ಹೋಗುವುದಕ್ಕಾಗಿ ಹಣ ಕೊಡಲು ನಿರಾಕರಿಸಿದ್ದಳು. ಮಗ ಈಗಲಾದರೂ ಕಣ್ಣ್ಮುಂದೆ ಇರಲಿ ಎನ್ನುವ ಆಸೆ ಅವಳದು,ಸಾವಿತ್ರಿಯ ಮನಸ್ಸು ಗೆಲ್ಲಬೇಕೆಂದ್ರೆ ಧಾರವಾಡಕ್ಕೆ ಹೋಗಲೇಬೇಕೆಂಬ ಹಟ ಇವನದು. ಕಡೆಗೆ ಪಾರವ್ವ ಭಿಕ್ಷೆಗೆ ಅಂತ ಹೋದಾಗ ಸೊಮ ಅವಳು ದೇವರಿಗೆ ಮುಡಿಪು ಅಂತ ಎತ್ತಿಟ್ಟಿದ್ದ ದುಡ್ಡಿನಲ್ಲಿ ಭಂಡಾರ ಮಿಶ್ರಿತ ಐದು ರೂಪಾಯಿಯ ನಾಲ್ಕು ನೋಟುಗಳೊಂದಿಗೆ ಮನೆ ಬಿಟ್ಟಿದ್ದ. ಅವನು ಬಸ್ಟ್ಯಾಂಡಿಗೆ ಬರುವುದಕ್ಕೆ ಸರಿಯಾಗಿ ಭೀಮಣ್ಣನ ಪುಷ್ಪಕ ವಿಮಾನ ಬಂದಿತ್ತು। ಭೀಮಣ್ಣ ನೀ ಹೇಳಿದಂಗ ಧಾರವಾಡಕ್ಕ ಹೊಂಟೆನಿ ಸ್ವಲ್ಪ ರಾಣೇಬೆನ್ನೂರ ತನಕ ಬಿಡತೀಯಾ ಅಂತ ಕೇಳಿದ್ದ। ತನ್ನ ಉಪದೇಶ ಅವನಿಗೆ ನಾಟಿದ್ದಕ್ಕೆ ಸೋಮನನ್ನು ರಾಣೇಬೆನ್ನೂರಿನವರೆಗು ಪುಕ್ಕಟೆಯಾಗಿ ಕರೆದುಕೊಂಡು ಹೋಗಲು ಒಪ್ಪಿದ್ದ। ಸೋಮ ಗಾಡಿಯಲ್ಲಿ ಕುಳಿತು ಒಂದು ತಿಂಗಳಿನಿಂದ ನಡೆಯುತ್ತಿದ್ದ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದ. ಸಾವಿತ್ರಿಯ ಅಪ್ಪಣೆಯಾದ ನಂತರ ಸೋಮ ಗಂಭೀರವಾಗಿ ಬರವಣೆಗೆಯಲ್ಲಿ ತೊಡಗಿದ. ಒಂದು ಸಂಯುಕ್ತಕರ್ನಾಟಕದಲ್ಲೂ ಪ್ರಕಟವಾಗಿತ್ತು. ಅವತ್ತು ಸೋಮ ಮುಂಜಾನೆಯಿಂದ ತನ್ನ ಕಥೆ ಹಿಡಿದುಕೊಂಡು ಇಡೀ ದೇವರಗುಡ್ಡವನ್ನು ಸುತ್ತುಹೊಡೆದಿದ್ದ. ಸಾವಿತ್ರಿ ತುಟಿಯಂಚಲೇ ನಕ್ಕಿದ್ದಳು. ಅಂತೂ ಭೀಮಣ್ಣನ ಟೆಂಪೋ ಭರ್ತಿಯಾಗಿತ್ತು. ಅಷ್ಟರಲ್ಲೇ ಭೀಮಣ್ಣ ವರಾತ ಶುರು ಮಾಡಿದ ಗಾಡಿ ಯಾಕೋ ಚಾಲು ಆಗವಲ್ದು ಸ್ವಲ್ಪ ತಳ್ರೆಪಾ , ಜನ ಶಪಿಸುತ್ತಲೇ ಅವನ ಕೆಲಸ ಮಾಡಿಕೊಟ್ಟಿದ್ದರು. ಆ ಟೆಂಪೋ ಎಷ್ಟು ಹಳೆಯದೆಂದರೆ ಸೋಮನ ತಂದೆ ದ್ಯಾಮಪ್ಪ ತನ್ನ ಮದುವೆಗೆ ಅದರಲ್ಲಿಯೇ ಕೂನಬೇವಿಗೆ ಹೋಗಿದ್ದು, ಮತ್ತು ಸೋಮನ ನಾಮಕರಣಕ್ಕೂ, ಈಗ ಸ್ವತಃ ಸೋಮನೇ ಹೋಗುತ್ತಿದ್ದಾನೆ ಅದರಲ್ಲಿ ತನ್ನ ಕನಸುಗಳನ್ನು ಸಕಾರಗೊಳಿಸಲು.

ಅಂತೂ ಸೋಮ ಧಾರವಾಡ ತಲುಪಿದ. ಆದರೆ ಇರುವುದು ಎಲ್ಲಿ, ಏನೂ ಅಂತ ಒಂದು ತಿಳಿಯಲಿಲ್ಲ. ಸಾಹಿತಿಯಾಗಲಿಕ್ಕೆ ಬಂದವನಿಗೆ ಸ್ವಹಿತಕ್ಕೊಂದು ನೆಲೆಯಿರಲಿಲ್ಲ ಅಲ್ಲಿ. ಸುಮಾರು ದಿನಗಳ ಸತತ ಪ್ರಯತ್ನದಿಂದ ಸೋಮನಿಗೆ ಸುಭಾಷ ರೋಡಿನಲ್ಲಿ ಒಂದು ಚಾಕರಿ ದೊರಕಿತ್ತು. ಅವನಲ್ಲಿದ್ದ ಬರೆಯಬೇಕೆಂಬ ಉತ್ಸಾಹ ಕಂಡು ಪುಸ್ತಕದಂಗಡಿಯ ಮಾಲಿಕರು ಈ ತರ್ಜುಮೆ ಕೆಲಸವನ್ನು ನೀಡಿದ್ದರು ಈಗ ನೋಡಿದರೆ ಪೆನ್ನೆ ಮುಡುತ್ತಿಲ್ಲ, ಹೊಸ ಪೆನ್ನಿಗೆ ಹಣವಿಲ್ಲ. ಸರಿಯಾಗಿ ಅದೇ ಹೊತ್ತಿಗೆ ಅಲ್ಲಿ ದೇವರಗುಡ್ದದಲ್ಲಿ ಸಾವಿತ್ರಿ ಮದುವೆಯಾಗಿ ತನ್ನ ಗಂಡನೊಂದಿಗೆ ಮೊದಲ ಮಗುವಿನ ಹರಕೆಗಾಗಿ ಮೈಲಾರಲಿಂಗಯ್ಯನ ಗುಡ್ಡದ ಮೆಟ್ಟಿಲನ್ನು ಏರುತ್ತಿದ್ದಳು.
ಮಹೇಶ ಎಸ್ ಲಕ್ಶ್ಮೆಶ್ವರ

Tuesday, December 4, 2007

ಕುರಿಪಲ್ಯ

ನಾನ ಬಡಕೊಂಡೆ ಮುದುಕಿ ಏನೇನು ಆಸೆಪಡ್ತಿತ್ತು ಎಲ್ಲಾ ತಿಂಗಳ ತಿಥಿಗೆ ಮಾಡಿ ಹಾಕ್ರಿ ಅಂತ ಒಬ್ರರ ಕೆಳಿದ್ರೆ ನನ್ನ ಮಾತ, ಅನುಭವಿಸ್ರಿ ಈಗ. ಹಿಡಕೊಣದ, ಹಿಡಕೊಂಡಾಳ ನನಗರ ಹಿಡದಿದ್ದರ ನಾನು ಹೋಗತಿದ್ದೆ ಅತ್ಲಾಗ, ಹೋಗಿ ಆ ಶಾರಿಗೆ ಹಿಡ್ದಾಳ ನಿಮ್ಮವ್ವ . ಶಾರಿಗೆ ಹೊದ ವಾರರ ಗಂಡಿನ ಕಡೆದವ್ರು ನೋಡಿಕೆಂಡ ಹೋಗ್ಯಾರ ಇಲ್ಲಿ ನೋಡಿದ್ರ ಹಿಂಗಾಗಿ ಆಗಿ ಕುಂತದ . ಅಲ್ಲಾ ಅಕಿ ಆಸೆನರ ಎನಿತ್ತಪ್ಪಾ ಕ್ರಿಷ್ಣಪ್ಪ, ಬಂಗಾರ, ಮತ್ತೊಂದ, ಕುರಿ ಪಲ್ಯ ಅಂದ್ರ ಬಾಯಿ ಬಿಡ್ತಿದ್ಲ ತಿಂಗಳ ತಿಥಿಗೆ ಅದನ್ನ ಮಾಡಿಹಾಕಿಲ್ಲ ಅಂತ ಹೀಂಗ ಬಂದ ಕಾಡಾಕತ್ತಾಳ. ಕಾಲಕೇಜಿ ತಂದ ಮಾಡಿ ಹಾಕಿದ್ರ, ಹಿಂಗೆಲ್ಲಾ ಆಗತಿರಲಿಲ್ಲ ನೋಡ್ರಿ ಅಂತ ಮನೆಗೆ ಬಂದ ಪ್ರತಿಯೊಬ್ಬರಿಗೂ ತನ್ನ ಹೆಂಡತಿಯ ದೆವ್ವ ಇಪ್ಪತ್ತು ವರ್ಷದ ಮೊಮ್ಮಗಳು ಶಾರಿಗೆ ಹಿಡಿದಿದೆ ಎಂದು ಖಚಿತಪಡಿಸುತ್ತಿದ್ದ ಪಾಂಡಪ್ಪ . ನಿಮ್ಮಪ್ಪನ ಸುಮ್ಮನ ಕುಂದ್ರಸ್ರಿ ಇನ್ನೇನ ಡಾಕ್ಟರ ಬರೋ ಹೊತ್ತ ಆತು, ಅವರ ಮುಂದನು ಹಿಂಗ ಮಾತಾಡಿ ನಮ್ಮ ಮರ್ಯಾದಿ ಮಣ್ಣಪಾಲ ಮಾಡಿಗಿಡ್ಯಾನು . ಅಂದವಳು ಮುದುಕ ಪಾಂಡಪ್ಪನ ಮಗ ಕ್ರಿಷ್ಣಪ್ಪನ ಹುಬ್ಬಳ್ಳಿ ಹೆಂಡತಿ. ಕ್ರಿಷ್ಣಪ್ಪ ಎಲ್ಲೋ ದಿಗಂತದಲ್ಲಿ ನೋಡುತ್ತ ಹೂಂಗುಟ್ಟಿದ ಆದರೆ ಅಲ್ಲಿಂದ ಕದಲಲಿಲ್ಲ.
ಪಾಂಡಪ್ಪ ಇಡೀ ರಾಣೇಬೆನ್ನೂರಿಗೆ ಪೇಪರ ಪಾಂಡಪ್ಪ ಅಂತಲೇ ಪರಿಚಯ. ಹುಬ್ಬಳ್ಳಿಯಿಂದ ಮುಂಜಾನೆ ನಾಲ್ಕಕ್ಕೇ ಬರುತ್ತಿದ್ದ ಏಕಮಾತ್ರ ಕನ್ನಡ ದಿನ ಪತ್ರಿಕೆ ಸಂಯುಕ್ತ ಕರ್ನಾಟಕದ ಅಧಿಕೃತ ಏಜೆಂಟ ಅವನು. ನಾಲ್ಕು ಘಂಟೆಗೆ ಪ್ರಾರಂಭವಾಗುತ್ತಿದ್ದ ಅವನ ಪೇಪರ ಹಾಕುವ ಕಾರ್ಯಕ್ರಮ ಆರು ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಊರಾದರೂ ಎಷ್ಟು ದೊಡ್ಡದಿತ್ತು , ಈ ಕಡೆ ಗೌಡ್ರ ಓಣಿಯಿಂದ ರೈಲ್ವೇ ಸ್ಟೇಷನವರೆಗೂ , ಆ ಕಡೆ ಪಶ್ಚಿಮ ಪ್ಲಾಟನಿಂದ ಚೌಡವ್ವನ ಗುಡಿಯವರೆಗು ಮುಗಿಯಿತು ಊರು ಇದ್ದಿದ್ದೆ ಅಷ್ಟು. ಅದರಲ್ಲೂ ಕನ್ನಡ ಪತ್ರಿಕೆ ಓದುವುವರು ಶೇಕಡಾ ೬೦ಇದ್ದರು ಅನ್ನಿ, ಮಿಕ್ಕವರು ಎಲ್ಲಾ ಮಾರವಾಡಿ ಶೇಠಗಳೆ ತುಂಬಿದ್ದರು ಊರಿನಲ್ಲಿ. ಪಾಂಡಪ್ಪನೂ ಪಕ್ಕದ ಹಾವನೂರಿನಿಂದ ವಲಸೆ ಬಂದವನೆ . ಅವನ ಪೂರ್ವಜರೆಲ್ಲ ಅವರ ಕುಲಕಸುಬಾದ ನೇಯ್ಗೆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತ ಬದುಕಿನ ಕಡೆಯ ದಿನಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದರು. ತಾನು ಇವರಂತಾಗುವುದು ಬೇಡವೆಂದು ಪಾಂಡಪ್ಪ ಮದುವೆಯಾದ ತಕ್ಷಣ ರಾಣೇಬೆನ್ನೂರು ಸೇರಿಕೊಂಡಿದ್ದ. ಕಲೆತ ನಾಲ್ಕನೇ ಕ್ಲಾಸು ಸಂಯುಕ್ತ ಕರ್ನಾಟಕ ಮಾರಾಟಕ್ಕೆ ಸಹಾಯ ಮಾಡಿತ್ತು. ಪಾಂಡಪ್ಪನ ಹೆಂಡತಿ ಸೀತವ್ವ ಗಂಡ ಮುಂಜಾನೆ ನಾಲ್ಕಕ್ಕೆ ಎದ್ದು ಹೋಗುವುದನ್ನ ಭಯ ಮಿಶ್ರಿತ ಆಶ್ಚರ್ಯಗಳಿಂದ ನೋಡುತ್ತಿದ್ದಳು. ತನ್ನ ಕೆಲಸವೇ ಅದು, ಜನರಿಗೆ ಪೇಪರ ಹಂಚುವುದು ಮತ್ತು ಅದರಿಂದಲೇ ನಮ್ಮ ಹೊಟ್ಟೆಗೆ ಅನ್ನ ಅಂತ ಸಿಗುವುದು ಅಂತ ಅವಳಿಗೆ ತಿಳಿಸುವುದರಲ್ಲಿ ಸಾಕು, ಸಾಕಾಗುತ್ತಿತ್ತು ಅವನಿಗೆ.ಹೀಗೆ ಸುಖವಾಗಿ ಸಾಗುತ್ತಿದ್ದ ಪಾಂಡಪ್ಪನ ಸಂಸಾರದಲ್ಲಿ ಮಕ್ಕಳಿಲ್ಲ ಎನ್ನುವ ಕೊರಗು ಮಾತ್ರ ಬಿಟ್ಟು ಬಿಡದೆ ಕಾಡುತ್ತಿತು. ಗಂಡಹೆಂಡತಿ ಸುತ್ತಮುತ್ತಲಿನ ಎಲ್ಲಾ ದೇವರಿಗೂ ಹೋಗಿಬಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಕಡೆಗೆ ಮನೆ ದೇವರಾದ ಹಾವನೂರದ್ಯಾಮವ್ವನಿಗೆ ಜೋಡಿ ಕುರಿಗಳ ಬ್ಯಾಟಿ ಕೊಡುತ್ತೆವೆ ಎಂದು ಹರಕೆ ಹೊತ್ತಾಗಲೇ ಸೀತವ್ವನ ಹೊಟ್ಟೆಯಲ್ಲಿ ಪಾಂಡಪ್ಪನ ಮೊದಲ ಬೀಜ ಮೊಳಕೆಯೊಡೆದಿದ್ದು. ಅದನ್ನು ಸೀತಮ್ಮ ಪ್ರಕಟಿಸಿದ್ದು ತನ್ನ ಕುರಿಪಲ್ಯವನ್ನು ತಿನ್ನುವ ಆಸೆಯಿಂದಲೇ. ಅವತ್ತು ಪಾಂಡಪ್ಪ ಇಡೀ ಊರಿಗೆ ಸಂಯುಕ್ತಕರ್ನಾಟಕದ ಜೊತೆಗೆ ಸಿಹಿಬೂಂದಿಯನ್ನು ಹಂಚಿದ್ದ.ಪೇಪರ ಏಜನ್ಸಿಯಿಂದ ಬರುತ್ತಿದ್ದ ಹಣ ಕೇವಲ ಇಬ್ಬರ ಹೊಟ್ಟೆಗೆ ಸರಿ ಹೋಗುತ್ತಿತ್ತು ಈಗ ಕ್ರಿಷ್ಣನ ಆಗಮನ,ಮತ್ತು ಅವನಿಗಾಗಿ ಹೊತ್ತ ಹರಕೆಗಳನ್ನು ಪೂರೈಸುವುದು, ಇವಿಗಳಿಗೆಲ್ಲಾ ಹಣ ಎಲ್ಲಿಂದ ತರುವುದು . ಸಾಲ ಜನ್ಮದಲ್ಲೆ ಮಾಡುವುದಿಲ್ಲವೆಂದು ನಿರ್ಧಾರ ಬೇರೆ ಮಾಡಿದ್ದನಲ್ಲ. ಆಗ ಪಾಂಡಪ್ಪ ( ಸ.ಕ) ಜೊತೆಗೆ ವರ್ಷದ ಕ್ಯಾಲೆಂಡರ್ ಮಾರುವುದಕ್ಕೆ ಶುರುಮಾಡಿದ. ಅದನ್ನು ಹುಬ್ಬಳ್ಳಿಯಿಂದಲೇ ತರುತ್ತಿದ್ದ. ಪಿ ಸಿ ಶಾಬಾದಿಮಠ ಕ್ಯಾಲೆಂಡರ್ ಅಂದ್ರೆ ಪ್ರತಿಷ್ಠೆಯೇ ಸರಿ ಜನ ಮುಗಿಬಿದ್ದು ಖರೀದಿಸುತ್ತಿದ್ದರು। ಪಾಂಡಪ್ಪನಿಗೆ ಗೊತ್ತಿತ್ತು ಕ್ಯಾಲೆಂಡರ್ ವ್ಯಾಪಾರವೆನಿದ್ದರೂ ಕೇವಲ ಎರಡೇ ತಿಂಗಳಿನದು ಅಂತ ಅದಕ್ಕೆ ಅದರ ಜೊತೆ ಎ ಬಿ ಸಿ ಡಿ , ನಂಬರಿನ ತೂಗುಪಟ, ಆಗ ತಾನೆ ಪ್ರಾರಂಭವಾಗಿದ್ದ ಕರ್ಮವೀರ ವಾರಪತ್ರಿಕೆ,ಹೊಸ ಕನ್ನಡ ಚಿತ್ರಗೀತೆಗಳು , ಸಿನಿಮಾ ನಾಯಕರ ಭಾವಚಿತ್ರಗಳು,ದಸರೆಗೆ ದೇವಿ ಮಹಾತ್ಮೆ, ಊರಿನಲ್ಲಿ ಹೊಸದಾಗಿ ಕಟ್ಟಿದ ಏಸು ಸ್ವಾಮಿ ದೇವಸ್ಥಾನಕ್ಕೆ ಸಂಭಂದಿಸಿದ ಪುಸ್ತಕ, ರಾಜ್ಯೋತ್ಸವ, ಅಗಸ್ಟ ೧೫ ಕ್ಕೆ ಬಾವುಟಗಳ ಮಾರಾಟ, ಹೀಗೆ ಪಟ್ಟಿ ಬೆಳೆಯುತ್ತ ಹೋಯಿತು ಆದರೆ ಪಾಂಡಪ್ಪ ದುಡ್ಡು ಅಂತ ಕಂಡದ್ದು ವರಮಾಹಾಲಕ್ಷ್ಮಿ ಪೋಜೆಯ ಪುಸ್ತಕದಲ್ಲಿಯೇ ಅಷ್ಟೊಂದು ಮಾರಾಟವಾಗುತ್ತಿತ್ತದು । ನಂತರದ ದಿನಗಳಲ್ಲಿ ಪಾಂಡಪ್ಪ ತಿರುಗಾಡಿದ್ದು ಸಾಕೆಂದು ಎಮ್ ಜಿ ರಸ್ತೆಯ(ರಾಣೇಬೆನ್ನೂರಿನಲ್ಲೂ ಒಂದು ಎಮ್ ಜಿ ರಸ್ತೆ ಇದೆ) ಸಂಪತ್ ಸ್ಟೀಲ್ ಅಂಗಡಿಯ ಶೇಠನ ಕೈಕಾಲು ಹಿಡಿದು ಅವನ ಅಂಗಡಿಯ ಎದುರು ತನ್ನ ಪುಸ್ತಕ ಮಾರಾಟಕ್ಕೆ ಜಗ ಗಿಟ್ಟಿಸಿಕೊಂಡ ಆ ಜಾಗ ಸಿಕ್ಕ ಮೇಲೆಯೇ ಪಾಂಡಪ್ಪ ಒಂದು ಸ್ವಂತ ಮನೆ , ಹೆಂಡತಿಯ ಕೊರಳತಾಳಿಗೆ ಎಂಟು ಅರಗು ಮಿಶ್ರಿತ ಬಂಗಾರದ ಗುಂಡುಗಳು, ಬೆಳೆದ ಮಗನಿಗೆ ಒಂದು ಸೈಕಲ್ಲು(ಆದರೆ ಕ್ರಿಷ್ಣ ತನ್ನ ಜೀವಮಾನದಲ್ಲೇ ಸೈಕಲ್ಲ ಓಡಿಸುವುದನ್ನು ಕಲೆಯಲಿಲ್ಲ) ಅಂತ ಮಾಡಿದ್ದು. ಇಷ್ಟೇಲ್ಲಾ ಆದ ನಂತರ ಅವನ ಮನೆಗೆ ಸಂಭಂದಿಕರ ಆಗಮನವು ಹೆಚ್ಚಾಯಿತು. ಮೊದಲು ಪಾಂಡಪ್ಪ ಯಾರ ಮನೆಗಾದರೂ ಹೋದರೆ ಹಣಕ್ಕೆ ಬಂದಿರಬಹುದು ಎಂದು ಊಹಿಸುತ್ತ, ಮತ್ತು ಅವನು ಕೇಳದೆ ಇದ್ದಾಗ ತಮ್ಮ ಊಹೆ ತಪ್ಪಾಯಿತು ಎಂದು ಬೇಸರ ಪಡುತ್ತಿದ್ದ ಅದೇ ಜನ ಈಗ ಅವನ ಬಾಗಿಲಿಗೆ ಬರುವಂತಾಗಿದ್ದರು.ಪಾಂಡಪ್ಪ ಬಂದವರನ್ನು ಸರಿಯಾಗಿ ಉಪಚರಿಸಿಯೆ ಕಳುಹಿಸಿಕೊಡುತ್ತಿದ್ದ.ಕ್ರಿಷ್ಣಪ್ಪ ಎಂಟನೇ ಕ್ಲಾಸಿನ ವರೆಗೂ ಕಲೆತು ನಂತರ ಮುಂದೆ ಶಾಲೆಗೆ ಹೋಗದೆ ಅದೇ ಎಮ್ ಜಿ ರಸ್ತೆಯ ಹರಕಚಂದ ಶೇಠನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಪಾಂಡಪ್ಪ ತನ್ನ ಕೆಲಸ ತನ್ನ ಜೊತೆಗೆ ಮಣ್ಣಾಗುತ್ತದೆ ಎಂದು ತುಂಬ ವ್ಯಥೆಪಟ್ಟುಕೊಂಡ. ಕ್ರಿಷ್ಣಪ್ಪ ಮದುವೆ ವಯಸ್ಸಿಗೆ ಬಂದಾಗ ಪಾಂಡಪ್ಪ ಸಭಂದಿಕರಲ್ಲೆ ಹೆಣ್ಣು ತರದೆ ದೂರದ ಹುಬ್ಬಳ್ಳಿಯಿಂದ ಹೊರಗಿನ ಹೆಣ್ಣುತಂದು ಮದುವೆ ಮಾಡಿದ.ಪಾಂಡಪ್ಪನ ಹೆಂಡತಿ ಸೀತವ್ವ ಯಾವುದಕ್ಕೂ ತಕರಾರು ಮಾಡದೆ ತನ್ನ ಪಾಡಿಗೆ ತಾನಿದ್ದಳು। ಒಂದು ರೀತಿಯಲ್ಲಿ ಅವಳ ಜಗತ್ತು ತೀರ ಚಿಕ್ಕದು, ತಾನು, ತನ್ನ ಗಂಡ, ಮತ್ತು ಮಗ, ಇಷ್ಟೇ.ಅವಳ ತವರು ಮನೆಕಡೆಯವರು ಯಾರು ಬದುಕಿರಲಿಲ್ಲ. ಅವಳ ತಮ್ಮನ ಮಗ ಹುಬಳ್ಳಿಯ ಬಸ್ಯ್ಟಾಂಡ ಹತ್ತಿರ ಯಾವುದೊ ಮಿಠಾಯಿ ಅಂಗಡಿಯಲ್ಲಿ ಇದ್ದಾನೆ ಎಂದು ತಿಳಿದಿತ್ತು ಅಷ್ಟೆ ಯಾರು ನೋಡಿರಲಿಲ್ಲ. ಆದರೆ ಆ ಕೊರಗು ಅವಳನ್ನು ಸಾಯುವವರೆಗೂ ಬಿಡಲಿಲ್ಲ. ಸೂಕ್ಷ್ಮಗ್ರಾಹಿ ಪಾಂಡಪ್ಪ ಹುಬ್ಬಳ್ಳಿಗೆ ಹೋದಾಗಲೆಲ್ಲ ಅವನನ್ನು ಹುಡುಕುವ ಪ್ರಯತ್ನ ಪಟ್ಟಿದ್ದ. ಎಲ್ಲಿಂದ ಸಿಕ್ಕಾನು ಅಂತಹ ದೊಡ್ಡ ಶಹರದಲ್ಲಿ ಅವನ ಒಂದು ಫೋಟೊ ಸಹ ಇಲ್ಲ ಇವರ ಹತ್ತಿರ. ಸೀತವ್ವ ಗಂಡ ಊರಿನಿಂದ ಬಂದ ತಕ್ಷಣ ಅವನ ಮುಖ ನೋಡುತ್ತಿದ್ದಳು ಇವನಲ್ಲಿ ಉತಾರವಿರುತ್ತಿರಲಿಲ್ಲ.
ಕೇವಲ ಒಂದೇ ಸಂತಾನ ಪಡೆದಿದ್ದ ಪಾಂಡಪ್ಪನ ಮನೆ ಕ್ರಿಷ್ಣಪ್ಪನ ಮದುವೆಯ ನಂತರವೇ ನಂದಗೋಕುಲವಾಗಿದ್ದು ,ಆದರೆ ಕ್ರಿಷ್ಣಪ್ಪನಿಗೆ ಹುಟ್ಟಿದ ಮೂರು ಮಕ್ಕಳು ಹೆಣ್ಣಾಗಿದ್ದರಿಂದ ಕ್ರಿಷ್ಣಪ್ಪನ ಮುಖದಲ್ಲಿ ಒಂದು ಚಿಂತೆಯ ಗೆರೆ ಅಚ್ಚಳಿಯದಂತೆ ಉಳಿದು ಹೋಯಿತು. ಕ್ರಮೆಣ ಕ್ಷೀಣವಾಗುತ್ತಿದ್ದ ಅಪ್ಪನ ವ್ಯಾಪಾರ ,ರೋಗಗ್ರಸ್ಥ ತಾಯಿ, ಶ್ರೀಮಂತ ಹೆಂಡತಿಯ ಹಂಗಿನ ಮಾತುಗಳು, ಇವುಗಳೆಲ್ಲದರಿಂದ ಕ್ರಿಷ್ಣಪ್ಪ ಈ ಲೋಕದ ಮನುಷ್ಯನಾಗೆ ಇರಲಿಲ್ಲ. ಹುಟ್ಟಿದ ಮೂರು ಮಕ್ಕಳಲ್ಲಿ ನಂತರದ ಎರಡು ಹುಡುಗಿಯರು ಸಣ್ಣ ತಲೆಯವು ಹುಟ್ಟಿದ್ದವು, ಹೀಗೆ ಹೇಳುವುದಾದರೆ ಮನುಷ್ಯರ ದೇಹ ಕುರಿಯ ತಲೆ, ಕ್ರಿಷ್ಣಪ್ಪನ ಹೆಂಡತಿಗೆ ಇದು ಹೊಸದಾಗಿ ಕಂಡರೆ ಅವನ ಅಪ್ಪ, ಅಮ್ಮ, ಇದು ಯಾವ ತಪ್ಪಿ ಹೋದ ಹರಕೆಯ ಶಾಪ ಎಂದು.ಕ್ರಿಷ್ಣಪ್ಪ ಒಂದು ವಿಚಿತ್ರವಾದ ಯಾರಿಗೂ ಹೇಳಿಕೊಳ್ಳಲಿಕ್ಕಾಗದ ಸಂತೋಷದಲ್ಲಿದ್ದ. ಸಣ್ಣ ತಲೆಯ ಮಕ್ಕಳು ಅಬ್ಬಬ್ಬಾ ಅಂದರೆ ಐದು ವರ್ಷ ಬದುಕಿಯಾವು ನೋಡಿಲ್ವಾ ನಾನು ಚಿಕ್ಕಪ್ಪನ ಮಕ್ಕಳೇ ಹುಟ್ಟಿದ್ದವಲ್ಲಾ ಹೀಗೆ ಸಣ್ಣ ತಲೆಯವು ,ಸರಿಯಾಗಿ ಐದು ವರ್ಷವು ಬದುಕಲಿಲ್ಲ ಅವು ಒಂದರಹಿಂದೆ ಒಂದರಂತೆ ಎರಡೇವರ್ಷಗಳ ಅಂತರದಲ್ಲಿ ಹೋರಟೆ. ಗಂಡಾಗಲಿ, ಗಂಡಾಗಲಿ ಎಂದು ಪ್ರಯತ್ನಿಸಿ ಮೂರು ಹೆಣ್ಣನ್ನೆ ಕರೆತಂದಿದ್ದ ಕ್ರಿಷ್ಣಪ್ಪ ಮೂರು ಅದೇ ಆದಾಗ ತನ್ನ ಪ್ರಯತ್ನಕ್ಕೆ ಪೂರ್ಣವಿರಾಮ ಹಾಕಿದ್ದ। ಈಗ ಮೂರರಲ್ಲಿ ಎರಡಕ್ಕೆ ಸಣ್ಣತಲೆ, ಬೆಳೆಯುವ ಮೊದಲೆ ಮುರಿದು ಬಿದ್ದಿದ್ದವು ಅವು. ಕ್ರಿಷ್ಣಪ್ಪ ಅದಕ್ಕೆ ಸಂತೋಷವನ್ನು ಪಡಲಿಲ್ಲ, ದುಖ;ವಂತೂ ಮೊದಲೆ ಆಗಲಿಲ್ಲ. ಈಗ ಉಳಿದಿರುವ ಒಬ್ಬಳು ಖರ್ಚು ಆದರೆ ಮುಗಿಯಿತು ನನ್ನ ಜವಾಬ್ದಾರಿ ಅಂದುಕೊಂಡಿದ್ದ.ಅಷ್ಟರಲ್ಲೆ ಶುರುವಾಯಿತಲ್ಲಾ ಸೀತವ್ವನ ವಿಚಿತ್ರ ಕಾಯಿಲೆ. ಸರುರಾತ್ರಿ ಮನೆಯಿಂದ ಓಡುವುದಕ್ಕೆ ಶುರುಮಾಡಿದಳೆಂದರೆ ಹೋಗಿ ನಿಲ್ಲುತ್ತಿದ್ದದ್ದು ಉಕ್ಕಡಗಾತ್ರಿ ಕಡೆ ಹೋಗುವ ರಸ್ತೆಯ ಕಡೆಗೆ. ಗಂಡಸರ ತರಹ ನಿಂತುಕೊಂಡೆ ಜಲಭಾದೆ ತೀರಿಸುವುದು, ಎಲ್ಲರನ್ನೂ ಅವ್ಯಾಚ್ಚ ಶಬ್ದಗಳಿಂದ ನಿಂದಿಸುವುದು ಇದರಿಂದ ಎಲ್ಲರಿಗೂ ಸಾಕು ಸಾಕಾಗಿತ್ತು ಯಾವುದೊ ದೆವ್ವ ಹಿಡಿದಿದೆ ಅಂತಲೇ ಮಾತಾಡಿಕೊಂಡರು ಅದರೆ ಅವಳಿಗೆ ಬಂದಂತಹ ಕಾಯಿಲೆ ಯಾವುದು ಅಂತ ತಿಳಿದುಕೊಳ್ಳುವುದಕ್ಕೆ ಯಾರು ಪ್ರಯತ್ನ ಪಡಲಿಲ್ಲ. ಅವಳ ಎಲ್ಲ ಆಟಗಳು ನಿಂತಿದ್ದು ಅವಳ ಸಾವಿನ ನಂತರವೇ . ಒಬ ಪಾಂಡಪ್ಪನ ಹೊರತಾಗಿ ಯಾರಿಗೂ ಅಷ್ಟು ನೋವೂ ಆಗಲಿಲ್ಲ.ಪಾಂಡಪ್ಪ ಅಂದಿನಿಂದ ಮಾತೆ ನಿಲ್ಲಿಸಿದ, ಅವನ ಪಕ್ಕದಲ್ಲಿ ತಟ್ಟೆ ಬಂದರೆ ಊಟ ಇಲ್ಲದಿದ್ದರೆ ಊಪವಾಸ . ಕ್ರಿಷ್ಣಪ್ಪನು ಅದರ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಂಡಿರಲಿಲ್ಲ. ಸೀತವ್ವನ ತಿಂಗಳ ತಿಥಿಯಾಗಿ ಸರಿಯಾದ ಒಂದು ವಾರಕ್ಕೆ ಶಾರಿಯ ಹುಚ್ಚಾಟಗಳು ಶುರುವಾಗಿದ್ದವು. ರಾತ್ರಿ ವೇಳೆ ಪೂಜೆಗೆ ಕೂಡುವುದು, ಅಜ್ಜಿಯ ಹಾಗೆ ಗಂಡಸರ ತರಹ ನಿಂತುಕೊಂಡು.. . ಅವಳಂತೆಯೆ ಮಾತನಡುವುದು, ನನ್ನ ಮೊಮ್ಮಗನನ್ನ ಹುಡಕಲಿಲ್ಲ ನೀವು ಎಂದು ಎದೆ , ಎದೆ ಬಡಿದುಕೊಳ್ಳುವುದು, ಇದೆಲ್ಲದರಿಂದ ರೋಸಿಹೋದ ಕ್ರಿಷ್ಣಪ್ಪನ ಹೆಂಡತಿ ಮಗಳನ್ನು ಹೊರಗೆ ಕಳುಹಿಸುವುದನ್ನೆ ನಿಲ್ಲಿಸಿದಳು. ಮನೆಯಲ್ಲಿ ಕುರಿಪಲ್ಯ ಮಾಡಿಹಾಕ್ರೋ ಅಂತ ಮನೆ ಸೂರು ಕಿತ್ತು ಹೋಗುವ ಹಗೆ ಕಿರುಚುವುದು,ಊಟಕ್ಕೆ ಕುಳಿತರೆ ಇಪ್ಪತ್ತು ರೊಟ್ಟಿಗಳನ್ನು ಒಂದೇ ಸಾರಿ ಮುಗಿಸುವುದು, ಮತ್ತು ಅಜ್ಜಿಯ ತರಹವೇ ಉಕ್ಕಡಗಾತ್ರಿಯ ದಾರಿಗೆ ಹೋಗಿ ನಿಲ್ಲುವುದು, ಇನ್ನು ಸುಮ್ಮನಿದ್ದದ್ದು ಸಾಕೆಂದು ಪಾಂಡಪ್ಪ ಬಾಯಿಬಿಟ್ಟಿದ್ದ.ಸೀತವ್ವನ ದೆವ್ವವೇ ಶಾರಿಗೆ ಹಿಡಿದುಕೊಂಡಿರುವುದು ಅಂತ.ಕ್ರಿಷ್ಣಪ್ಪನ ಹೆಂಡತಿ ಹ್ಯಾಗೆ ನಂಬಿಯಾಳು ಅಷ್ಟೊಂದು ಓದಿದವಳು. ಡಾಕ್ಟರ ಸಹ ಕೈಚಿಲ್ಲಿದಾಗ, ಕುರಿಪಲ್ಯ ಮಾಡಿ ಇನ್ನೊಮ್ಮೆ ಸೀತವ್ವನ ತಿಥಿ ಮಾಡಿದರೂ ಹುಚ್ಚಾಟ ನಿಲ್ಲದಿದ್ದಾಗ ಉಕ್ಕಡಗಾತ್ರಿಯ ಅಜ್ಜಯ್ಯನ ಹತ್ತಿರ ಹೋದರೆ ಅಲ್ಲಿ ಶಾರಿ ಹುಚ್ಚು ಅತೀರೆಕಕ್ಕೆ ಹೋಯಿತು ಯಾವುರ್ ಅಜ್ಜಯ್ಯಲೆ ನೀನು ನನ್ನ ಮೊಮ್ಮಗ ಸಿಗೊಗಂಟ ಹೋಗಕಿ ಅಲ್ಲ ನಾನು, ಥೂ ನಿನ್ನ ಜನ್ಮಕ್ಕ ಬೆಂಕಿ ಹಾಕ ನನ್ನ ತಮ್ಮನ ಮಗನಿಗೆ ನನ್ನ ಮೊಮ್ಮಗಳನ್ನ ಕೊಡಬೇಕ ಅನ್ನೋ ಆಸೆ ಹಂಗ ಉಳಿಸಿ ಬಿಟ್ಟೆಲ್ಲೊ ಅಜ್ಜಯ್ಯಾ, ಬರಲಿ ಅಮವಾಸಿ ಅವತ್ತ ಮಾಡತೆನಿ ನಿನಗ ಅಂದವಳೆ ದೇವಸ್ಥಾನ ತುಂಬ ಉರುಳಾಟ ಪ್ರಾರಂಭಿಸಿ ಬಿಟ್ಟಳು. ಊರಿಗೆ ಬಂದ ತಕ್ಷಣ ಕ್ರಿಷ್ಣಪ್ಪ ಒಂದು ವಾರಕ್ಕೆ ಆಗುವಷ್ಟು ಬಟ್ಟೆಗಳೊಂದಿಗೆ ಹುಬಳ್ಳಿಗೆ ಹೊರಟುಹೋದ.

ನಮ್ಮ ಬೀchi ನೆನಪು

ನಾವು ಇಂದು ನೋಡುತ್ತಿರುವ, ಅನುಭವಿಸುತ್ತಿರುವ ಗಬ್ಬುತನವನ್ನು ಬೀಚಿಯವರು ಅಂದೇ ಕಂಡಂತಿದೆ । ಅವರ "ಉತ್ತರಭೂಪ" ಕೃತಿಯಿಂದ ಆಯ್ದ ಪ್ರಶ್ನೋತ್ತರಗಳು ಹೀಗಿವೆ।

ನಮ್ಮ ದೇಶದಲ್ಲಿರುವ ಅದ್ಭುತಾಶ್ಚರ್ಯಗಳಾವುವು??

ಬೇಕಾದಷ್ಟಿವೆ-ಹಣ ಮಾಡದ ರಾಜಕಾರಣಿ,ವಿನಯಶೀಲ ಸಾಹಿತಿ,
ಲೈಟ ಕಂಬಕ್ಕೆ ಕಲ್ಲು ಹೊಡೆಯದ ವಿದ್ಯಾರ್ಥಿ,
ಎಲ್ಲ ತಪ್ಪೂ ವಿದ್ಯಾರ್ಥಿಯದೇ ಅನ್ನದ ಗುರು,
ಹೆಂಡತಿಗೆ ಹೆದರದ ಅಧಿಕಾರಿ,
ಗಂಡನ ಮೇಲೆ ಸಂಶಯವಿಲ್ಲದ ಹೆಂಡತಿ,
ತಾನು ತ್ರಿಲೋಕ ಸುಂದರಿ ಎಂದು ತಿಳಿಯದ ಹೆಣ್ಣು,
ಅಂತಹವಳು ಹಿಂದು ಬರುವಾಗ ತಿರಿತಿರಿಗಿ ನೋಡದ ಮುದುಕ,
ಅಪಪ್ರಚಾರಕ್ಕೆ ಆಸ್ಪದ ಕೊಡದ ಸ್ವಾಮಿಗಳು-ಈ ಒಂಬತ್ತು ಅದ್ಭುತಾಶ್ಚರ್ಯಗಳಲ್ಲವೇ??
ಈಗ ಇವುಗಳನ್ನ ಇಂದಿಗೆ ಹೀಗೆ ಹೊಲಿಸಬಹುದೆ।

ಪಕ್ಷ ಬಿಟ್ಟು ಹೊಗುತ್ತೆನೆ ಎಂದು ಹೇಳುವ ಸಹ ರಾಜಕಾರಣಿಗೆ ನಿನ್ನ ಹಗರಣಗಳನ್ನು ಬಯಲಿಗೆಳೆಯುತ್ತೆನೆ ಅನ್ನದ ರಾಜಕಾರಣಿ,
ಬಡ್ಡಿ ಇಲ್ಲದೆ ಸಾಲ ನೀಡುವ ಬ್ಯಾಂಕುಗಳು,
ಕರೆದಲ್ಲಿಗೆ ಬರುವ ಬೆಂಗಳೂರಿನ ಅಟೋಗಳು,
ಹಗರಣಗಳಿಲ್ಲದ ಸಂಸ್ಥೆಗಳು,
ವಶಿಲಿಗಳಿಲ್ಲದೆ ಸಿಗುವ ನೌಕರಿಗಳು,
ಐದು ವರ್ಷ ಸ್ಥಿರವಾಗಿ ನಡೆಯುವ ಸರ್ಕಾರಗಳು,
ಸಹೊದ್ಯೋಗಿಗಳಿಗೆ ಕಿರಿಕಿರಿ ಮಾಡದ ಪ್ರೊಜೆಕ್ಟ ಮ್ಯಾನೆಜರಗಳು,
ಆಸ್ತಿಯಿಲ್ಲದ ಹೈಟೆಕ್ ಸ್ವಾಮಿಗಳು,
ಮತ್ತು ಹೋದ ತಕ್ಷಣಕ್ಕೆ ಆಗುವ ಸರ್ಕಾರಿ ಕೆಲಸಗಳು।

ಇನ್ನಷ್ಟು ಬೀಚಿಯವರ ಬರಹಗಳು ಹೀಗಿವೆ।

ಮನುಷ್ಯನ ಅಧ:ಪತನದ ನಾಂದಿ, ಯಾವುದು??

ಪರ ವಂಚನೆಯಿಂದ ನಾಂದಿ, ಆತ್ಮ ವಂಚನೆಯಿಂದ ಮುಕ್ತಾಯ।

ಇನ್ನೊಂದು
ದಿನದಿನಕ್ಕೆ ಮಾನವ ಸುಧಾರಿಸಿದಂತೆ
ಅವನ ಅಕಾರವೇಕೆ ಬದಲಾಗುತ್ತಿಲ್ಲ??

ಆಕಾರ ಇದ್ದ ಹಾಗೇ ಇರುತ್ತದೆ।ವಿಕಾರಗಳಷ್ಟೇ ಬೇಗ ಬೇಗ ಬದಲಾಗುತ್ತದೆ।
ಮತ್ತೊಂದು
ಆಹಾರ ಸಮಸ್ಯ ಎಂದಿನವರೆಗೆ?
ಹಸಿವು ಇರುವವರೆಗೆ ಮಾತ್ರ।
ಬರೆದರೆ ಬ್ಲಾಗೆ ತುಂಬಿತು ಅಂತ ನೀವೆನಂತೀರಿ??